ADVERTISEMENT

ವಿಶ್ವಶಾಂತಿ ಶೃಂಗಕ್ಕೆ ತರಳಬಾಳು ಶ್ರೀ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 18:21 IST
Last Updated 6 ಫೆಬ್ರುವರಿ 2019, 18:21 IST
ಬೃಹನ್ಮಠದಲ್ಲಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಜತೆ ಆಡಳಿತವರ್ಗ, ಗ್ರಾಮಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.
ಬೃಹನ್ಮಠದಲ್ಲಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಜತೆ ಆಡಳಿತವರ್ಗ, ಗ್ರಾಮಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.   

ಸಿರಿಗೆರೆ: ವಿಶ್ವಸಂಸ್ಥೆಯ ಸಹವರ್ತಿ ಸಂಸ್ಥೆಯಾದ ಅಂತರರಾಷ್ಟ್ರೀಯ ಶಾಂತಿ ಪ್ರತಿಷ್ಠಾನದ ಆಹ್ವಾನದ ಮೇರೆಗೆ ಕೊರಿಯಾ ರಾಜಧಾನಿ ಸೋಲ್‌ನಲ್ಲಿ ಫೆ. 7ರಿಂದ 11ರವರೆಗೆ ನಡೆಯಲಿರುವ ‘ವಿಶ್ವ ಶೃಂಗ ಶಾಂತಿ’ ಸಮ್ಮೇಳನದಲ್ಲಿ ಭಾಗವಹಿಸಲು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬುಧವಾರ ಸಿರಿಗೆರೆಯಿಂದ ತೆರಳಿದರು.

‘ಅಂತರರಾಷ್ಟ್ರೀಯ ಶಾಂತಿ ಸುಭದ್ರತೆ ಮತ್ತು ಮಾನವ ಅಭಿವೃದ್ಧಿ’ ಕುರಿತು ಅವರು ವಿಷಯ ಮಂಡಿಸುವರು. ವಿವಿಧ ದೇಶಗಳ ಪ್ರಮುಖರು, ಸಂಸದೀಯ ಪಟುಗಳು, ಧಾರ್ಮಿಕ ನಾಯಕರು ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT