ADVERTISEMENT

ಆಲದಕಟ್ಟಿ: ರೈತ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ; ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 21:52 IST
Last Updated 14 ಡಿಸೆಂಬರ್ 2021, 21:52 IST
ಹಾವೇರಿ ತಾಲ್ಲೂಕಿನ ಆಲದಕಟ್ಟಿ ಗ್ರಾಮದ ರೈತ ಶೆಂಕ್ರಪ್ಪ ಕೊಡೆಪ್ಪ ಅಗಡಿ ದಂಪತಿ, ಮಕ್ಕಳು
ಹಾವೇರಿ ತಾಲ್ಲೂಕಿನ ಆಲದಕಟ್ಟಿ ಗ್ರಾಮದ ರೈತ ಶೆಂಕ್ರಪ್ಪ ಕೊಡೆಪ್ಪ ಅಗಡಿ ದಂಪತಿ, ಮಕ್ಕಳು   

ಹಾವೇರಿ: ತಾಲ್ಲೂಕಿನ ಆಲದಕಟ್ಟಿಯಲ್ಲಿ ರೈತ ಕುಟುಂಬದ ಮೂವರು ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ್ದು, ದಂಪತಿ ಮೃತಪಟ್ಟು, ಮಗಳು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ರೈತ ಶೆಂಕ್ರಪ್ಪ ಕೊಡೆಪ್ಪ ಅಗಡಿ ತಮ್ಮ ಹೊಲದಲ್ಲಿ ಮಾವಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಅವರ ಪತ್ನಿ ವಾಣಿಶ್ರೀ ಮತ್ತು ಮಗಳು ಕೀರ್ತಿ ವಿಷ ಸೇವಿಸಿದ್ದು ವಾಣಿಶ್ರೀ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮೃತರಾದರು. ಬಿಎಸ್ಸಿ ಓದುತ್ತಿರುವ ಮಗಳು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಶೆಂಕ್ರಪ್ಪ ಅವರ ಪುತ್ರ ಖಾಸಗಿ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.

ಶೆಂಕ್ರಪ್ಪ ಅವರು ಒಂದು ಎಕರೆ ಸ್ವಂತಜಮೀನು ಹೊಂದಿದ್ದು ಎಂಟು ಎಕರೆ ಲಾವಣಿ ಹಾಕಿಕೊಂಡಿದ್ದರು. ₹6.80 ಲಕ್ಷ
ಸಾಲವಿದ್ದು, ಒಂದೂವರೆ ಎಕರೆ ಜಮೀನುಮಾರಿ ಮಾಡಿ ಸ್ವಲ್ಪ ಸಾಲ ತೀರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.