ADVERTISEMENT

ಹಳಿ ತಪ್ಪಿದ ಎಂಜಿನ್‌, ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 19 ಮೇ 2020, 20:59 IST
Last Updated 19 ಮೇ 2020, 20:59 IST
ಪಡೀಲ್‌ ಬಳಿ ಹಳಿ ತಪ್ಪಿದ ರೈಲ್ವೆ ಎಂಜಿನ್‌ ತೆರವು ಕಾರ್ಯ ಮಂಗಳವಾರ ನಡೆಯಿತು
ಪಡೀಲ್‌ ಬಳಿ ಹಳಿ ತಪ್ಪಿದ ರೈಲ್ವೆ ಎಂಜಿನ್‌ ತೆರವು ಕಾರ್ಯ ಮಂಗಳವಾರ ನಡೆಯಿತು   

ಮಂಗಳೂರು: ಕೇರಳದ ತಿರೂರಿನಿಂದ ಜೈಪುರಕ್ಕೆ ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಶ್ರಮಿಕ್‌ ರೈಲಿನ ಎಂಜಿನ್‌ ನಗರದ ಹೊರವಲಯದ ಪಡೀಲ್‌ ಬಳಿ ಹಳಿ ತಪ್ಪಿದ್ದು, ಯಾರಿಗೂ ಅಪಾಯವಾಗಿಲ್ಲ.

ರೈಲು ಎಂಜಿನ್ ಸೋಮವಾರ ಮಧ್ಯರಾತ್ರಿ 1.35ರ ಸುಮಾರಿಗೆ ಹಳಿ ತಪ್ಪಿದೆ. ಬೋಗಿಗಳು ಸುರಕ್ಷಿತವಾಗಿದ್ದು, ಯಾವುದೇ ತೊಂದರೆಯಾಗಿಲ್ಲ. ಬದಲಿ ಎಂಜಿನ್ ವ್ಯವಸ್ಥೆ ಮಾಡಿ ಮುಂಜಾನೆ 4 ಗಂಟೆಗೆ ರೈಲನ್ನು ಮಂಗಳೂರು ಜಂಕ್ಷನ್‌ ನಿಲ್ದಾಣಕ್ಕೆ ಕರೆತರಲಾಯಿತು. ಹೊಸ ಎಂಜಿನ್‌ ಅಳವಡಿಸಿ,ಬೆಳಿಗ್ಗೆ 6 ಗಂಟೆಗೆ ಜೈಪುರಕ್ಕೆ ಕಳುಹಿಸಲಾಯಿತು ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT