ಹುಬ್ಬಳ್ಳಿ: ಪುದುಚೇರಿ– ದಾದರ್ ಎಕ್ಸ್ಪ್ರೆಸ್ (11006) ರೈಲು ಕಟ್ಪಾಡಿ ಜಂಕ್ಷನ್ನಲ್ಲಿ ಮತ್ತು ಎಸ್ಎಂವಿಟಿ ಬೆಂಗಳೂರು– ಕಾಕಿನಾಡ ಟೌನ್ ಎಕ್ಸ್ಪ್ರೆಸ್ (17209) ರೈಲು ಜೋಲಾರ್ಪೇಟೆ ಜಂಕ್ಷನ್ ತಲುಪುವ ಮತ್ತು ನಿರ್ಗಮಿಸುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಪುದುಚೇರಿ– ದಾದರ್ ಚಾಲುಕ್ಯ ಎಕ್ಸ್ಪ್ರೆಸ್ ರೈಲು, ಸದ್ಯ ಕಟ್ಪಾಡಿ ಜಂಕ್ಷನ್ಗೆ ರಾತ್ರಿ 1.20ಕ್ಕೆ ತಲುಪಿ, 1.40ಕ್ಕೆ ನಿರ್ಗಮಿಸುತ್ತಿದೆ. ಸೆ. 9ರಿಂದ ಈ ರೈಲು ರಾತ್ರಿ 1.05ಕ್ಕೆ ಆಗಮಿಸಿ 1.25ಕ್ಕೆ ನಿರ್ಗಮಿಸಲಿದೆ.
ಎಸ್ಎಂವಿಟಿ ಬೆಂಗಳೂರು– ಕಾಕಿನಾಡ ಟೌನ್ ಎಕ್ಸ್ಪ್ರೆಸ್ ರೈಲು, ಪ್ರಸ್ತುತ ಜೋಲಾರ್ಪೇಟೆ ಜಂಕ್ಷನ್ಗೆ ಮಧ್ಯಾಹ್ನ 2.03ಕ್ಕೆ ಆಗಮಿಸಿ 2.05ಕ್ಕೆ ನಿರ್ಗಮಿಸುತ್ತಿದೆ. ಸೆ. 10ರಿಂದ ಈ ರೈಲು ಮಧ್ಯಾಹ್ನ 2 ಗಂಟೆಗೆ ತಲುಪಿ, 2.05ಕ್ಕೆ ನಿರ್ಗಮಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.