ಬೆಂಗಳೂರು: ಪ್ರಧಾನಿ ಹತ್ಯೆಗೆ ಯಾರೇ ಸಂಚು ನಡೆಸಿದ್ದರೂ ಅದು ಖಂಡನೀಯ. ಆದರೆ ಪ್ರತಿ ಮೂರು ತಿಂಗಳಿಗೊಮ್ಮೆ ‘ಹತ್ಯೆಗೆ ಸಂಚು’ ಎಂದು ಹೇಳಿ ಸುದ್ದಿ ಹಬ್ಬಿಸುವುದು, ಸಂಚಿನ ಮೂಲ ವ್ಯಕ್ತಿಯನ್ನು ಬಹಿರಂಗಪಡಿ ಸದೇ ಇರುವುದು ಅಥವಾ ಆತ ಯಾರು ಎಂದು ತಿಳಿಯದೇ ಇರುವುದು ಕೂಡಾ ಸರಿಯಲ್ಲ ಎಂದು ವಸತಿ ಸಚಿವ ಯು.ಟಿ.ಖಾದರ್ ಹೇಳಿದರು.
ಇತ್ತೀಚೆಗೆ ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪದ ಮೇಲೆ ಕವಿ ವರವರ ರಾವ್ ರಾವ್ ಸಹಿತ ಹಲವರ ಬಂಧನಕ್ಕೆ ಸಂಬಂಧಿಸಿದಂತೆ ಹೀಗೆ ಪ್ರತಿಕ್ರಿಯಿಸಿದರು.
ಗುಪ್ತಚರ ಸಂಸ್ಥೆಗಳು ಆಗಾಗ ಪ್ರಧಾನಿ ಹತ್ಯೆಗೆ ಸಂಚು ನಡೆಯುತ್ತಿದೆ ಎಂದು ಹೇಳಿರುವುದು ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ. ಈ ರೀತಿ ಮಾಹಿತಿ ನೀಡಿದರೆ ಏನು ಪ್ರಯೋಜನ? ಈ ಮಾಹಿತಿ ಕೊಟ್ಟು ಆಗಾಗ ಸುದ್ದಿ ಮಾಡುವ ಬದಲು ಸಂಚುಕೋರನನ್ನೇ ತೋರಿಸಬಹುದಲ್ಲವೇ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.