ADVERTISEMENT

ಕಾರವಾರ: ಸಮುದ್ರದಲ್ಲಿ ಮುಳುಗಿ ಯುವಕರಿಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 12:12 IST
Last Updated 30 ಜೂನ್ 2019, 12:12 IST
ನವೀದ್, ನಯೀಮ್
ನವೀದ್, ನಯೀಮ್   

ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಸಮುದ್ರಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರವಾಸಿಗರು ಭಾನುವಾರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಧಾರವಾಡದ ಮಹಮದ್ ನವೀದ್ (17) ಮತ್ತು ನಯೀಮ್ ಹೆಬ್ಬಳ್ಳಿ (21) ಮೃತರು.

ನಗರದ ಸಾಗರ ದರ್ಶನ ಹಾಲ್‌ನಲ್ಲಿಸಂಬಂಧಿಕರ ಆರತಕ್ಷತೆ ಕಾರ್ಯಕ್ರಮಕ್ಕೆ‌ ಬಂದಿದ್ದ ಅವರು ಸಮುದ್ರದಲ್ಲಿ ಈಜಲು ತೆರಳಿದ್ದರು. ಸಮುದ್ರ ಪ್ರಕ್ಷುಬ್ಧವಾಗಿದೆ, ನೀರಿಗೆ ಇಳಿಯಬೇಡಿ ಎಂದು ಎಚ್ಚರಿಕೆ ನೀಡಿದರೂ ಕೇಳಲಿಲ್ಲ. ತಮಗೆ ಈಜು ಬರುತ್ತದೆ ಎಂದು ಹೇಳುತ್ತ ಸಮುದ್ರಕ್ಕಿಳಿದರು. ಆಗ ದೊಡ್ಡ ಅಲೆ ಬಂದು ಸೆಳೆದುಕೊಂಡು ಹೋಯಿತು ಎಂದು ಸಂಬಂಧಿಕರು ಹೇಳಿದ್ದಾರೆ.

ADVERTISEMENT

ನೀರುಪಾಲಾದ ಮಹಮದ್ ನವೀದ್ ಶವ ಪತ್ತೆಯಾಗಿದ್ದು, ನಯೀಮ್ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

ಕಾರವಾರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.