ADVERTISEMENT

ಪಂಚಮಸಾಲಿ ಹೋರಾಟ: ವಿಜಯೇಂದ್ರ ಕೃಪಾಪೋಷಿತ ನಾಟಕ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 15:35 IST
Last Updated 10 ಫೆಬ್ರುವರಿ 2021, 15:35 IST
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್   

ತುಮಕೂರು: ಪಂಚಮಸಾಲಿ ಹೋರಾಟಕ್ಕೆ ವಿಜಯೇಂದ್ರವಿರೋಧ ವ್ಯಕ್ತಪಡಿಸಿದ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಇದುವಿಜಯೇಂದ್ರ ಕೃಪಾಪೋಷಿತ ನಾಟಕ ಎಂದು ಹೇಳಿದರು.

ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ಸಭೆ ಮುಗಿದ ಬಳಿಕ ನಿರ್ಣಯ ಗೊತ್ತಾಗಲಿದೆ. ಮುತ್ತಿಗೆ ಹಾಕುತ್ತಾರೋ, ಬಿಡುತ್ತಾರೋ ಅದು ನಿರಾಣಿ ಕೈಯಲ್ಲೂ ಇಲ್ಲ, ಯಾರ ಕೈಯಲ್ಲೂ ಇಲ್ಲ. ನಿರಾಣಿ ಕೇಳಿ ಹೋರಾಟ ಮಾಡುತ್ತಿಲ್ಲ. ಮನವೊಲಿಸುತ್ತಾರೋ , ಧನವೊಲಿಸುತ್ತಾರೋ ಗೊತ್ತಿಲ್ಲ ಎಂದರು.

ಸಿಎಂ ಮನಸ್ಸು ನೋಯಿಸುವ ಕೆಲಸವಲ್ಲ. ಇಡೀ ಸಮುದಾಯದ ನೋವಿದು ಎಂದ ಅವರು, ಪಂಚಮಸಾಲಿ ಹೋರಾಟಕ್ಕೆ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಅದುವಿಜಯೇಂದ್ರ ಕೃಪಾಪೋಷಿತ ನಾಟಕ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.