ಬೆಂಗಳೂರು: ನೀರಿನ ಸಂರಕ್ಷಣೆ, ಮಳೆ ಸಂಗ್ರಹ ವ್ಯವಸ್ಥೆ ಮತ್ತು ತ್ಯಾಜ್ಯ ನೀರು ವ್ಯವಸ್ಥೆ ಅಳವಡಿಸಿಕೊಂಡು ನೀರಿನ ಸದ್ಬಳಕೆ ಮಾಡಿಕೊಳ್ಳುತ್ತಿರುವವರಿಗೆ ಜಲಮಂಡಳಿಯು ‘ಜಲ ಋಷಿ ಪುರಸ್ಕಾರ’ ನೀಡಲು ಮುಂದಾಗಿದ್ದು, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದೆ.
ಬೆಂಗಳೂರು ಜಲಮಂಡಳಿ ವಾಪ್ತಿಯಲ್ಲಿ ವಾಸಿಸುವ ಸಾರ್ವಜನಿಕರು ಮತ್ತು ಸಂಸ್ಥೆಗಳಿಗೆ ಇದು ಅನ್ವಯವಾಗಲಿದೆ. ಜೂನ್ 17ರಿಂದ 27ರ ನಡುವೆ ಅರ್ಜಿ ಸಲ್ಲಿಸಬೇಕು.
ಗೃಹ ಬಳಕೆ ಕಟ್ಟಡಗಳು ಅಥವಾ ಪ್ರತ್ಯೇಕ ಮನೆಗಳು, 20 ಮತ್ತು ಅದಕ್ಕಿಂತ ಕಡಿಮೆ ಮನೆಗಳಿರುವ ಅಪಾರ್ಟ್ಮೆಂಟ್ಗಳು, 20ಕ್ಕಿಂತ ಹೆಚ್ಚು ಮನೆಗಳಿರುವ ಅಪಾರ್ಟ್ಮೆಂಟ್ಗಳು, ಗೃಹೇತರ ಕಟ್ಟಡಗಳು ಅಂದರೆ ಹೋಟೆಲ್ ಮತ್ತು ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಟ್ಟಡಗಳು, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಮತ್ತು ಆಸ್ಪತ್ರೆಗಳು, ಹೀಗೆ ಏಳು ವಿಭಾಗಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
ಮಾಹಿತಿಗೆ ಮಂಡಳಿಯ ವೆಬ್ಸೈಟ್ www.bwssb.gov.in ನೋಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.