ADVERTISEMENT

ಹಾಸನಕ್ಕೆ ರೇವಣ್ಣ: ಜ.15ರ ಬಳಿಕ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 22:30 IST
Last Updated 20 ಡಿಸೆಂಬರ್ 2022, 22:30 IST
   

ಬೆಳಗಾವಿ: ‘ಹಾಸನವೋ ಹೊಳನರಸೀಪುರವೋ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಲಾಗುವುದು ಎಂಬ ಬಗ್ಗೆ ಜನವರಿ 15ರ (ಧನುರ್ಮಾಸ ಕಳೆದ ನಂತರ) ಬಳಿಕ ನಿರ್ಧಾರ ಮಾಡುವೆ’ ಎಂದು ಜೆಡಿಎಸ್ ಶಾಸಕಎಚ್.ಡಿ. ರೇವಣ್ಣ ಹೇಳಿದರು.

ಹಾಸನ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲವಲ್ಲ? ಎಲ್ಲಿ ನಿಮ್ಮ ಸ್ಪರ್ಧೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ‘ನಿಮ್ಮನ್ನೆಲ್ಲ ಕೇಳಿ, ದಿನಾಂಕಗಳನ್ನು ನೋಡಿ ತೀರ್ಮಾನ ಪ್ರಕಟಿಸುತ್ತೇನೆ‘ ಎಂದರು.

ಹಾಸನದಲ್ಲಿ ಸ್ಪರ್ಧೆ ಖಚಿತವೇ ಎಂದಿದ್ದಕ್ಕೆ, ’ರೇವಣ್ಣ ನಿಂತರೆ 50 ಸಾವಿರ ಮತಗಳಿಂದ ಸೋಲಿಸುತ್ತೇವೆ ಎಂದು ಕೆಲವರು ಹೇಳಿಕೊಂಡು ಓಡುತ್ತಿದ್ದಾರೆ. ಅವರ ಸವಾಲು ಸ್ವೀಕರಿಸಲೇಬೇಕಲ್ಲ. ಎಲ್ಲವನ್ನು ಹೇಳುವುದಕ್ಕೆ ಸಮಯ ಬರುತ್ತೆ. ಒಳ್ಳೆಯ ದಿನಾಂಕ ಬರಬೇಕಲ್ಲ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.