ADVERTISEMENT

25ರಂದು ಎಲ್ಲದಕ್ಕೂ ಉತ್ತರ ಜನಾರ್ದನ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 21:45 IST
Last Updated 21 ಡಿಸೆಂಬರ್ 2022, 21:45 IST
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ   

ಮಸ್ಕಿ (ರಾಯಚೂರು ಜಿಲ್ಲೆ):‘ರಾಜಕೀಯದ ಎಲ್ಲಾ ಊಹಾಪೋಹಗಳಿಗೆ ಬೆಂಗಳೂರಿನಲ್ಲಿ ಡಿ.25ರಂದು ಉತ್ತರ ನೀಡಲಾಗುವುದು’ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

‘ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುವೆ. ಬಳ್ಳಾರಿಯಲ್ಲಿ ನನಗೆ ಇರಲು ಅವಕಾಶವಿರದ ಕಾರಣ ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚು ತಿರುಗಾಡಬೇಕಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಸಚಿವ ಬಿ.ಶ್ರೀರಾಮುಲು, ಬಿಜೆಪಿ ಮುಖಂಡರು ಸೇರಿ ಯಾರ ಜೊತೆಗೂ ನನ್ನ ವೈಮನಸ್ಸು ಇಲ್ಲ. ಕೆಲ ಕಾರಣಗಳಿಂದ ನಾನು ಸಕ್ರಿಯ ರಾಜಕಾರಣ ಮತ್ತು ಜನರಿಂದ ದೂರವಿದ್ದೆ’ ಎಂದರು.

ADVERTISEMENT

ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಮುಖಂಡರು ರೆಡ್ಡಿ ಅವರನ್ನು ಭೇಟಿಯಾಗಿ, ಗೋಪ್ಯ ಮಾತುಕತೆ ನಡೆಸಿದರು. ಕೆಲ ಮುಖಂಡರ ಮನೆಗಳಿಗೂರೆಡ್ಡಿ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.