ಚಿಕ್ಕಮಗಳೂರು: ‘ಈ ಜಿಲ್ಲೆಯು ಪ್ರವಾಸಿ ತಾಣವಾಗಿದ್ದು, ಹೋಂ ಸ್ಟೇಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಟ್ಟಿದ್ದೇವೆ. ಹೋಂ ಸ್ಟೆಗಳಲ್ಲಿ ಮಾದಕ ದ್ರವ್ಯ ಉಪಯೋಗಿಸಿದ ಪ್ರಕರಣ ಕಂಡುಬಂದರೆ ಮಾಲೀಕರೇ ಹೊಣೆ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಲೀಕರು ಮಾಹಿತಿ ನೀಡಿದರೆ ಅವರಿಗೆ ಇನಾಮು ನೀಡುತ್ತೇವೆ. ಮುಚ್ಚು ಹಾಕಲು ಯತ್ನಿಸಿದರೆ ಅವರಿಗೆ ಶಿಕ್ಷೆಯಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.
‘ಡ್ರಗ್ಸ್, ಮಾದಕ ದ್ರವ್ಯ ದಂಧೆ ನಿಯಂತ್ರಣ ಮಾಡೋದು ವಿಶೇಷ ವಿಂಗ್ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಂದು ಪೊಲೀಸ್ ಠಾಣೆಯ ಜವಾಬ್ದಾರಿ. ಡ್ರಗ್ಸ್ ಹಾವಳಿ ಎಲ್ಲಿಯೂ ಇರಬಾರದು ಎಂಬುದು ನಮ್ಮ ಗುರಿ’ ಎಂದು‘ಕೋವಿಡ್ ಆರಂಭದಲ್ಲಿ ಜಿಲ್ಲೆಯಲ್ಲಿ ನಿರ್ವಹಣೆ ಚೆನ್ನಾಗಿತ್ತು. ಕೋವಿಡ್–19 ಕಾಲಘಟ್ಟದಲ್ಲಿ ಸತತ ಆರು ತಿಂಗಳಿನಿಂದ ಪೊಲೀಸರು ಚೆನ್ನಾಗಿ ಕೆಲಸ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.