ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಭಾನುವಾರ, 10–9–1995

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 15:14 IST
Last Updated 9 ಸೆಪ್ಟೆಂಬರ್ 2020, 15:14 IST
   

ನ್ಯಾಯಾಧೀಶರ ತರಬೇತಿಗೆ ಶೀಘ್ರ ಅಕಾಡೆಮಿ ಸ್ಥಾಪನೆ

ಬೆಂಗಳೂರು, ಸೆ. 9– ನ್ಯಾಯಾಧೀಶರಿಗೆ ತರಬೇತಿ ನೀಡುವ ಸಲುವಾಗಿ ಕರ್ನಾಟಕದಲ್ಲಿ ಸದ್ಯದಲ್ಲಿಯೇ ನ್ಯಾಯಾಂಗ ಅಕಾಡೆಮಿಯೊಂದನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಂ.ಎಲ್‌. ಪೆಂಡ್ಸೆ ಇಂದು ಇಲ್ಲಿ ತಿಳಿಸಿದರು.

ರಾಜ್ಯ ವಕೀಲರ ಮಂಡಲಿ ಮತ್ತು ‘ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ’ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ನ್ಯಾಯಾಂಗ ಸುಧಾರಣೆಗಳು ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಅತಿಥಿಯಾಗಿದ್ದರು.

ADVERTISEMENT

ಹೊಸದಾಗಿ ನೇಮಕಗೊಳ್ಳುವ ವಿವಿಧ ಶ್ರೇಣಿಯ ನ್ಯಾಯಾಧೀಶರಿಗೆ ಈ ಅಕಾಡೆಮಿ ಮೂಲಕ ತಂಡಗಳಲ್ಲಿ ಹಂತಹಂತವಾಗಿ ತರಬೇತಿ ನೀಡಲಾಗುವುದು. ಎಂಟು ವಾರಗಳ ತರಬೇತಿ ಅವಧಿಯಲ್ಲಿ ಅನುಭವಿ ನ್ಯಾಯಾಧೀಶರು ವಿವಿಧ ಬಗೆಯ ಮೊಕದ್ದಮೆಗಳನ್ನು ಹೇಗೆ ಇತ್ಯರ್ಥಗೊಳಿಸಬೇಕು ಎಂಬುದರ ಬಗ್ಗೆ ಉದಾಹರಣೆಗಳ ಸಮೇತ ತಿಳಿಸಿ ಹೇಳುವರು ಎಂದು ವಿವರಿಸಿದರು.

ವಾಸುದೇವನ್ ಪ್ರಕರಣ ರಾಷ್ಟ್ರಪತಿಗೆ ಗೌಡರ ಮನವಿ

ನವದೆಹಲಿ, ಸೆ. 9– ನ್ಯಾಯಾಲಯ ನಿಂದನೆ ಗಾಗಿ ಸುಪ್ರೀಂ ಕೋರ್ಟ್‌ನಿಂದ ಒಂದು ತಿಂಗಳ ಕಾರಾಗೃಹ ಶಿಕ್ಷೆಗೆ ಒಳಗಾಗಿರುವ ಕರ್ನಾಟಕದ ಹಿರಿಯ ಐಎಎಸ್‌ ಅಧಿಕಾರಿ ಜೆ. ವಾಸುದೇವನ್‌ ಅವರಿಗೆ ಕ್ಷಮಾದಾನ ನೀಡುವಂತೆ ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರು ಇಂದು ರಾಷ್ಟ್ರಪತಿ ಶಂಕರ ದಯಾಳ್‌ ಶರ್ಮಾ ಅವರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.