
ಪ್ರಜಾವಾಣಿ ವಾರ್ತೆಇಸ್ಲಾಮಾಬಾದ್, (ಪಿಟಿಐ): ಸರ್ಕಾರದ ಪರವಾಗಿದ್ದ ಬುಡಕಟ್ಟು ಜನಾಂಗದ ಮುಖ್ಯಸ್ಥನ ಅಂತಿಮಯಾತ್ರೆ ವೇಳೆ ಬುಧವಾರ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 20 ಜನರು ಸಾವಿಗೀಡಾಗಿದ್ದು, 50 ಜನರು ಗಾಯಗೊಂಡಿದ್ದಾರೆ.
ವಾಯವ್ಯ ಪಾಕಿಸ್ತಾನದ ಗಲಭೆಪೀಡಿತ ಖೈಬರ್-ಪಖ್ತುನಖ್ವಾ ಪ್ರಾಂತ್ಯದ ಜಂದೂಲ್ ಪ್ರದೇಶದಲ್ಲಿ ಅಂತಿಮಯಾತ್ರೆ ಸಾಗುತ್ತಿದ್ದಾಗ ಈ ದಾಳಿ ನಡೆದಿದೆ. ಯಾವುದೇ ಸಂಘಟನೆಗಳು ಕೃತ್ಯದ ಹೊಣೆ ಹೊತ್ತಿಲ್ಲ. ತಾಲಿಬಾನ್ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.
ಅಪಘಾತ: 30ಸಾವು
ಲುವಾಂಡ(ಎಎಫ್ಪಿ): ಯುದ್ಧ ವಿಮಾನವೊಂದು ನೆಲಕ್ಕಪ್ಪಳಿಸಿದ ಪರಿಣಾಮ ಮೂವರು ಸೇನಾಧಿಕಾರಿಗಳು ಸೇರಿದಂತೆ 30 ಜನ ಮೃತಪಟ್ಟಿರ್ದುವ ಘಟನೆ ಗುರುವಾರ ಇಲ್ಲಿನ ಹುವಾಂಬೊ ವಿಮಾನ ನಿಲ್ದಾಣದಲ್ಲಿ ನಡೆದಿದೆ. ದುರಂತಕ್ಕೆ ನಿಖರ ಕಾರಣ ತಿಳಿದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.