ADVERTISEMENT

ಕಠ್ಮಂಡುವಿಗೆ ಶನಿವಾರ ಪ್ರಣವ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಕಠ್ಮಂಡು (ಪಿಟಿಐ): ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಎರಡು ದಿನಗಳ ಭೇಟಿಗಾಗಿ ಶನಿವಾರ ಕಠ್ಮಂಡುವಿಗೆ ತೆರಳಲಿದ್ದಾರೆ. ನೇಪಾಳದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಭರತ್ ಮೋಹನ್ ಅಧಿಕಾರಿ ಅವರ ಆಹ್ವಾನದ ಮೇರೆಗೆ ಪ್ರಣವ್ ಈ ಭೇಟಿ ನೀಡಲಿದ್ದಾರೆ.

ನೇಪಾಳ ಪ್ರಧಾನಿ ಜಲನಾಥ್ ಖನಾಲ್ ಮತ್ತು ಅಧಿಕಾರಿ ಹಾಗೂ ಇತರ ರಾಜಕೀಯ ಪಕ್ಷಗಳ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಲಿರುವ ಮುಖರ್ಜಿ, ಉಭಯರಾಷ್ಟ್ರಗಳ ವ್ಯಾಪಾರ, ವಾಣಿಜ್ಯ ಮತ್ತು ಆರ್ಥಿಕ ಸಹಕಾರಗಳ ನಡುವೆ ಚರ್ಚೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.