ಬೀಜಿಂಗ್(ಪಿಟಿಐ): ಅಗ್ನಿ ಆಕಸ್ಮಿಕ ಕಾಣಿಸಿಕೊಂಡ ಕಲ್ಲಿದ್ದಲು ಗಣಿಯ 255 ಮೀಟರ್ ಆಳದಲ್ಲಿ 91 ಕಾರ್ಮಿಕರು ಸಿಕ್ಕಿಹಾಕಿಕೊಂಡ್ದ್ದಿದ್ದರು. ಅವರಲ್ಲಿ 63 ಮಂದಿಯನ್ನು ರಕ್ಷಿಸಲಾಗಿದೆ.
ಚೀನಾದ ಶಾನ್ಡಾಂಗ್ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಬುಧವಾರ ರಾತ್ರಿ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಆ ಸಂದರ್ಭದಲ್ಲಿ ಗಣಿಯಲ್ಲಿ 91 ಮಂದಿ ಕಾರ್ಮಿಕರು ಕಾರ್ಯನಿರ್ವಹಿಸುತ್ತ್ದ್ದಿದರು. ಅವರಲ್ಲಿ ಗುರುವಾರ ಮುಂಜಾನೆ 63 ಮಂದಿಯನ್ನು ಗಣಿಯಿಂದ ಸುರಕ್ಷಿತವಾಗಿ ರಕ್ಷಿಸಲಾಯಿತು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಇನ್ನೂ 28 ಮಂದಿ ಗಣಿಯಲ್ಲಿಯೇ ಸಿಲುಕಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.