ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಹಿರಿಯ ಸಚಿವ ಸರ್ದಾರ ಸನಾವುಲ್ಲಾ ಜೆಹರಿ ಅವರನ್ನು ಗುರಿಯಾಗಿಟ್ಟುಕೊಂಡು ನಡೆಸಲಾದ ಬಾಂಬ್ ದಾಳಿಯಲ್ಲಿ ಸಚಿವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಲಾತ್ ಜಿಲ್ಲೆಯ ಸುರಬ್ ಬಳಿ ಸಚಿವರ ಕಾರು ಸಾಗುತ್ತಿದ್ದಾಗ ಈ ಬಾಂಬ್ ಸ್ಫೋಟ ಯತ್ನ ನಡೆದಿದೆ. ಜೆಹರಿ ಸೇವೆ ಮತ್ತು ಸಾಮಾನ್ಯ ಆಡಳಿತ ಇಲಾಖೆ ಸಚಿವರಾಗಿದ್ದಾರೆ.
ಸಚಿವರು ಶುಕ್ರವಾರ ರಾತ್ರಿ ಖುಜದಾರ್ದಿಂದ ಕಲಾತ್ ಕಡೆಗೆ ಹೊರಟಿದ್ದಾಗ ಅಂಜೆರಾ ಪ್ರದೇಶದಲ್ಲಿನ ಹೆದ್ದಾರಿಯಲ್ಲಿ ಈ ಬಾಂಬ್ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೃತ್ಯಕ್ಕೆ ತಾನೇ ಹೊಣೆ ಎಂದು ಬಲೂಚ್ ಲಿಬರೇಶನ್ ಫ್ರಂಟ್ (ಬಿಎಲ್ಎಫ್) ಹೇಳಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.