ADVERTISEMENT

ಭಾರತೀಯರ ಸಂಕಷ್ಟ ದುಪ್ಪಟ್ಟು: ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ವಾಷಿಂಗ್ಟನ್‌ (ಪಿಟಿಐ): ಇತ್ತೀಚಿನ ವರ್ಷಗಳಲ್ಲಿ ಭಾರತೀಯರ ಕಷ್ಟಗಳ ಸರಮಾಲೆ ದುಪ್ಪಟ್ಟಾಗಿದೆ ಎಂದು ಹೊಸ ಸಮೀಕ್ಷೆ ಹೇಳಿದೆ.

ಕೆಲವು ವರ್ಷಗಳಿಂದೀಚಿಗೆ ಭಾರತವು ಆರ್ಥಿಕ ಬಿಕ್ಕಟ್ಟು ಎದುರಿಸು ತ್ತಿರುವುದು ಅಲ್ಲಿನ ಜನರ ಮೇಲೆ ಪರಿ ಣಾಮ ಬೀರಿದೆ. ಪ್ರತಿ ನಾಲ್ವರು ಭಾರ ತೀಯರಲ್ಲಿ ಒಬ್ಬರಿಗೆ ಆರ್ಥಿಕ ಹಿಂಜರಿ ತದ ಬಿಸಿ ತಟ್ಟಿದೆ ಎಂದು ಗ್ಯಾಲಪ್‌ ಸಂಸ್ಥೆಯ ಜನಮತ ಸಂಗ್ರಹದ ವರದಿ ಹೇಳಿದೆ.

ಭಾರತದಲ್ಲಿರುವ ಇಂತಹ ಪರಿಸ್ಥಿತಿ ಯಿಂದಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂಕಷ್ಟಗಳ ಸರಮಾಲೆ­ಯಲ್ಲೂ ಹೆಚ್ಚಳ ವಾಗಿದೆ ಎಂದು ಅಮೆರಿಕ ಮೂಲದ ಜನಾಭಿಪ್ರಾಯ ಸಂಗ್ರಹ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.