ಬರ್ನ್, ಸ್ವಿಟ್ಜರ್ಲೆಂಡ್ (ಎಪಿ): `ವಾಲ್ಸ್ಟ್ರೀಟ್ ಮುತ್ತಿಗೆ~ ಆಂದೋಲನ ವ್ಯಾಪಕಗೊಳ್ಳುತ್ತಿರುವುದು ಗಂಭೀರ ವಿಷಯ ಎಂದಿರುವ ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು `ಪ್ರತಿಭಟನಾಕಾರರ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲೆ~ ಎಂದು ಅವರು ಹೇಳಿದ್ದಾರೆ.
ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲ ದೇಶಗಳ ಹಣಕಾಸು ಸಚಿವಾಲಯದ ಮುಖ್ಯಸ್ಥರು ಜನರ ಧ್ವನಿಯನ್ನು ಆಲಿಸಿ, ಸ್ಪಂದಿಸಬೇಕಾದ ಅಗತ್ಯವಿದೆ ಎಂದೂ ಅವರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.
ಕಾರ್ಪೋರೇಟ್ ಸಂಸ್ಥೆಗಳ ದುರಾಸೆ ಪ್ರವೃತ್ತಿಗಳ ವಿರುದ್ಧ ವ್ಯಾಪಕಗೊಳ್ಳುತ್ತಿರುವ `ವಾಲ್ಸ್ಟ್ರೀಟ್ ಮುತ್ತಿಗೆ~ ಆಂದೋಲನವನ್ನು ಪ್ರಸ್ತಾಪಿಸಿ ಅವರು ಮಾತನಾಡಿದ್ದಾರೆ.ಇತ್ತೀಚಿಗೆ ಜಗತ್ತು ಕಂಡ ಬಲುದೊಡ್ಡ ಆರ್ಥಿಕ ಸಂಬಂಧಿ ಆಂದೋಲನ ಇದಾಗಿದೆ ಎಂಬ ಮಾತನ್ನೂ ಬಾನ್ ಕಿ ಮೂನ್ ಅವರು ಒಪ್ಪಿಕೊಂಡಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.