ಮಾಲೆ/ನವದೆಹಲಿ (ಪಿಟಿಐ): ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಣ ವಿವಾದದಲ್ಲಿ ಗುತ್ತಿಗೆ ರದ್ದು ಆದೇಶಕ್ಕೆ ಸಿಂಗಪುರ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಅದನ್ನು ಗೌರವಿಸದ ಮಾಲ್ಡೀವ್ಸ್ ಸರ್ಕಾರ, ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದೆ.
ಈ ವಿಷಯದಲ್ಲಿ ತನ್ನ ನಿಲುವನ್ನು ಭಾರತಕ್ಕೆ ಮನವರಿಕೆ ಮಾಡಿಕೊಡಲು ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸುವುದಾಗಿಯೂ ಹೇಳಿದೆ.
ಭಾರತೀಯ ಮೂಲದ ನಿರ್ಮಾಣ ಕಂಪೆನಿ `ಜಿಎಂಆರ್' ಪಡೆದಿದ್ದ ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಣ ಗುತ್ತಿಗೆಯನ್ನು ರದ್ದು ಮಾಡಿದ್ದ ಮಾಲ್ಡೀವ್ಸ್ ಸರ್ಕಾರದ ಆದೇಶಕ್ಕೆ ಸಿಂಗಪುರದ ಹೈಕೋರ್ಟ್ ಸೋಮವಾರವಷ್ಟೆ ತಡೆಯಾಜ್ಞೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.