ADVERTISEMENT

ಕ್ಷಿಪಣಿ ದಾಳಿ ಸಂದೇಶ ತಂದ ಆತಂಕ

ಪಿಟಿಐ
Published 14 ಜನವರಿ 2018, 20:12 IST
Last Updated 14 ಜನವರಿ 2018, 20:12 IST

ವಾಷಿಂಗ್ಟನ್‌: ಹವಾಯಿ ದ್ವೀಪದಲ್ಲಿ ಭಾನುವಾರ ಖಂಡಾಂತರ ಕ್ಷಿಪಣಿ ದಾಳಿಯ ಎಚ್ಚರಿಕೆ ಸಂದೇಶ ಮೊಳಗಿದ್ದು, ಇದರಿಂದ ದ್ವೀಪರಾಷ್ಟ್ರದಲ್ಲಿ ಕೆಲ
ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೆಲಹೊತ್ತಿನ ಬಳಿಕ ಇದೊಂದು ‘ತಪ್ಪು ಎಚ್ಚರಿಕೆ ಸಂದೇಶ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಬೆಳಿಗ್ಗೆ 8.05ರ ಸುಮಾರಿಗೆ ಸ್ಥಳೀಯ ನಿವಾಸಿಗಳ ಮೊಬೈಲ್‌ಗಳಿಗೆ ತಲುಪಿದ ಸಂದೇಶದಲ್ಲಿ, ‘ಹವಾಯಿ ಮೇಲೆ ಖಂಡಾಂತರ ಕ್ಷಿಪಣಿ ಅಪಾಯವಿದೆ, ತಕ್ಷಣವೇ ಸೂಕ್ತ ಆಶ್ರಯ ಪಡೆದುಕೊಳ್ಳಿ, ಇದು ಕವಾಯತು ಅಲ್ಲ’ ಎಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT