ಕೊಲಂಬೊ: ಶ್ರೀಲಂಕಾದಲ್ಲಿ ಎಲ್ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಅವರ 64ನೇ ಹುಟ್ಟುಹಬ್ಬವನ್ನು ಸಾರ್ವಜನಿಕ
ವಾಗಿ ಆಚರಿಸಲು ಯೋಜನೆ ರೂಪಿಸಿದ್ದ ಮಾಜಿ ಕೌನ್ಸಿಲರ್ ಸೇರಿದಂತೆ 7 ಮಂದಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದು ಅವರಿಂದ ಕೇಕ್ ಹಾಗೂ ಬ್ಯಾನರ್ಗಳನ್ನು ವಶಪಡಿಸಿ
ಕೊಂಡಿದ್ದಾರೆ. ತಮಿಳರಿಗಾಗಿ ಪ್ರತ್ಯೇಕ ದೇಶದ ಸ್ಥಾಪನೆಗೆ ಆಗ್ರಹಿಸಿ, ಮೂರು ದಶಕಗಳ ಕಾಲ ಎಲ್ಟಿಟಿಇ ಸಂಘಟನೆ ಮೂಲಕ ಹೋರಾಟ ನಡೆಸಿದ ಪ್ರಭಾಕರನ್ ಅವರನ್ನು 2009ರಲ್ಲಿ ಶ್ರೀಲಂಕಾ ಸೇನೆ ಹತ್ಯೆ ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.