ADVERTISEMENT

ಚೀನಾ–ಭಾರತ ಪರಸ್ಪರ ಸಂಶಯದಿಂದ ನೋಡುವುದನ್ನು ನಿಲ್ಲಿಸಬೇಕು: ಚೀನಾ ವಿದೇಶಾಂಗ ಸಚಿವ

ಪಿಟಿಐ
Published 7 ಮಾರ್ಚ್ 2021, 16:00 IST
Last Updated 7 ಮಾರ್ಚ್ 2021, 16:00 IST
ವಾಂಗ್‌ ಯಿ
ವಾಂಗ್‌ ಯಿ   

ಬೀಜಿಂಗ್‌: ಚೀನಾ ಮತ್ತು ಭಾರತ ಪರಸ್ಪರರನ್ನು ಸಂಶಯದಿಂದ ನೋಡುವ, ದುರ್ಬಲಗೊಳಿಸುವುದನ್ನು ನಿಲ್ಲಿಸಬೇಕು. ಗಡಿ ಬಿಕ್ಕಟ್ಟನ್ನು ಶಮನಗೊಳಿಸುವ ಸಂಬಂಧ ಎರಡೂ ದೇಶಗಳು ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವುದು ಅಗತ್ಯ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಭಾನುವಾರ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚೀನಾ ಮತ್ತು ಭಾರತದ ನಡುವಿನ ಬಾಂಧವ್ಯವನ್ನು ಗಡಿ ಬಿಕ್ಕಟ್ಟಿಗೆ ಸೀಮಿತಗೊಳಿಸಬಾರದು. ಎರಡೂ ದೇಶಗಳು ನಡುವಿನ ಸ್ನೇಹವೂ ಗಟ್ಟಿಯಾಗಿದೆ’ ಎಂದು ಹೇಳಿದರು.

ಪೂರ್ವ ಲಡಾಖ್‌ ಗಡಿಯಲ್ಲಿ ಸಂಘರ್ಷ ಉದ್ಭವಿಸಿದಾಗಿನಿಂದ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಚೀನಾ ಹೇಗೆ ಅರ್ಥೈಸುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಗಡಿ ಬಿಕ್ಕಟ್ಟನ್ನು ಎರಡೂ ದೇಶಗಳು ಸಮರ್ಪಕವಾಗಿಯೇ ನಿರ್ವಹಿಸಿವೆ. ದ್ವಿಪಕ್ಷೀಯ ಸಹಕಾರವನ್ನೂ ವಿಸ್ತರಿಸಿವೆ’ ಎಂದು ಯಿ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.