
ಪಿಟಿಐಬೀಜಿಂಗ್: ಭಾರತ ಮತ್ತು ಚೀನಾದ ಜಂಟಿ ಸೇನಾ ಕವಾಯತು ಒಂದು ವರ್ಷದ ಬಳಿಕ ಇದೇ 11ರಿಂದ ಮತ್ತೆ ಆರಂಭವಾಗಲಿದೆ.
ಭಯೋತ್ಪಾದಕರ ವಿರುದ್ಧ ಹೊರಾಡುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಚೀನಾದ ಚೆಂಗ್ಡು ನಗರದಲ್ಲಿ ಕವಾಯತು ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದೇಶಗಳ ತಲಾ 100 ತುಕಡಿ ಸೈನಿಕರು ಕವಾಯತಿನಲ್ಲಿ ಪಾಲ್ಗೊಳ್ಳುವರು ಎಂದಿದ್ದಾರೆ.
ಎರಡು ದೇಶಗಳ ನಡುವಿನ ದೋಕಲಾ ಗಡಿ ವಿವಾದದ ಬಳಿಕ ಜಂಟಿ ಸೇನಾ ಕವಾಯತು ಸ್ಥಗಿತಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.