ADVERTISEMENT

ರಾಣಾ ಪ್ರಕರಣ: ಜುಲೈ 15ರೊಳಗೆ ಹೆಚ್ಚುವರಿ ದಾಖಲೆ ಸಲ್ಲಿಸಲು ಸೂಚನೆ

ಏಜೆನ್ಸೀಸ್
Published 25 ಜೂನ್ 2021, 6:27 IST
Last Updated 25 ಜೂನ್ 2021, 6:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಸ್ ಏಂಜಲೀಸ್ (ಎಪಿ): ಮುಂಬೈ ಭಯೋತ್ಪಾದನಾ ದಾಳಿಯ (2008) ಪ್ರಮುಖ ಆರೋಪಿ, ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ಪ‍್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 15ರೊಳಗೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಪ್ರತಿವಾದಿ ವಕೀಲರು ಮತ್ತು ಪ್ರಾಸಿಕ್ಯೂಟರ್‌ಗಳಿಗೆ ಆದೇಶಿಸಿದ್ದಾರೆ.

ಅಲ್ಲಿಯವರೆಗೂ ರಾಣಾನನ್ನು ಫೆಡರಲ್‌ ಕಸ್ಟಡಿಯಲ್ಲಿಯೇ ಇರಿಸಲು ಸೂಚನೆ ನೀಡಲಾಗಿದೆ.

ರಾಣಾ, ಪಾಕಿಸ್ತಾನಿ–ಅಮೆರಿಕನ್‌ ಹಾಗೂ ಎಲ್‌ಇಟಿ ಭಯೋತ್ಪಾದಕನಾಗಿರುವ ಡೇವಿಡ್ ಕೋಲ್ಮೆನ್ ಹೆಡ್ಲಿಯ ಬಾಲ್ಯದ ಗೆಳೆಯ. 166 ಜನರನ್ನು ಬಲಿ ಪಡೆದ ಮುಂಬೈ ದಾಳಿಯ ಪ್ರಮುಖ ಆರೋಪಿಯಾಗಿರುವ ಹೆಡ್ಲಿಗೆ ನೆರವಾಗಿದ್ದ ಎಂಬ ಆರೋಪ ರಾಣಾ ಮೇಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.