ಲಾಹೋರ್: ‘ಬಹುನಿರೀಕ್ಷಿತ ಕರ್ತಾರಪುರ ಕಾರಿಡಾರ್ ನವೆಂಬರ್ 9ರಂದು ಸಂಚಾರಕ್ಕೆ ಮುಕ್ತವಾಗಲಿದೆ’ ಎಂದು ಪಾಕಿಸ್ತಾನ ಘೋಷಿಸಿದೆ.
ಉದ್ದೇಶಿತ ಕರ್ತಾಪುರಕಾರಿಡಾರ್ಗೆ ಸ್ಥಳೀಯ ಮತ್ತು ವಿದೇಶಿ ಪತ್ರಕರ್ತರು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ.
‘ಯೋಜನೆಯ ಕಾಮಗಾರಿ ಶೇ 86ರಷ್ಟು ಮುಕ್ತಾಯವಾಗಿದೆ.ಮುಂದಿನ ತಿಂಗಳೊಳಗೆ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಲಿವೆ’ ಎಂದು ಯೋಜನೆಯ ನಿರ್ದೇಶಕ ಅತೀಫ್ ಮಜೀದ್ ತಿಳಿಸಿದರು.
ಪಾಕಿಸ್ತಾನದ ಕರ್ತಾಪುರದಲ್ಲಿರುವ ದರ್ಬಾರ್ ಸಾಹಿಬ್ ಮತ್ತು ಗುರುದಾಸ್ಪುರದ ಡೇರಾ ಬಾಬಾ ನಾನಕ್ ನಡುವೆ ಈ ಕಾರಿಡಾರ್ ಸಂಪರ್ಕ ಕಲ್ಪಿಸಲಿದ್ದು, ಭಾರತೀಯ ಸಿಖ್ ಯಾತ್ರಿಕರು ಮುಕ್ತವಾಗಿ ಸಂಚರಿಸಲು ಇದು ಅವಕಾಶ ಕಲ್ಪಿಸಲಿದೆ. ಇದಕ್ಕೆ ವೀಸಾ ಅಗತ್ಯವಿರುವುದಿಲ್ಲ. ಕರ್ತಾಪುರ ಸಾಹಿಬ್ಗೆ ಭೇಟಿ ನೀಡಲಷ್ಟೇ ಅನುಮತಿ ಪಡೆಯಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.