ADVERTISEMENT

ಹವಾಮಾನ ಬದಲಾವಣೆ ತಡೆಗೆ ಬದ್ಧತೆ; ವೇದಗಳೇ ಪ್ರೇರಣೆ ಎಂದ ಮೋದಿ

ಪಿಟಿಐ
Published 4 ಡಿಸೆಂಬರ್ 2018, 18:30 IST
Last Updated 4 ಡಿಸೆಂಬರ್ 2018, 18:30 IST
ಧಾನಿ ನರೇಂದ್ರ ಮೋದಿ
ಧಾನಿ ನರೇಂದ್ರ ಮೋದಿ   

ವಿಶ್ವಸಂಸ್ಥೆ: ಹವಾಮಾನ ವೈಪರೀತ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮಲ್ಲಿರುವ ಬದ್ಧತೆಗೆ ವೇದಗಳಲ್ಲಿ ಉಲ್ಲೇಖಿಸಿರುವ ಅಂಶಗಳೇ ಪ್ರೇರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾಗಿವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರಸ್‌ ಸೋಮವಾರ ಹೇಳಿದರು.

ಅರ್ಜೆಂಟೀನಾ ರಾಜಧಾನಿ ಬ್ಯೂನಸ್‌ ಐರಿಸ್‌ನಲ್ಲಿ ಇತ್ತೀಚೆಗೆ ಜರುಗಿದ ಜಿ–20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಮೋದಿ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ಈ ಸಂಬಂಧ ಚರ್ಚೆಯಾಗಿತ್ತು ಎಂದು ಗುಟೆರಸ್‌ ತಿಳಿಸಿದರು.

ಪೋಲೆಂಡ್‌ನ ಕಟೋವೈಸ್‌ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗುಟೆರಸ್‌ ಹೇಳಿದರು.

ADVERTISEMENT

‘ವೇದಗಳಲ್ಲಿನ ಉಲ್ಲೇಖಗಳೇ ನನಗೆ ಪ್ರೇರಣೆ ಎಂದು ಭಾರತದ ಪ್ರಧಾನಿ ಹೇಳಿದ್ದಾರೆ. ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಇಂತಹ ಪ್ರೇರಣಾದಾಯಕ ಅಂಶಗಳು ಸಿಗುತ್ತವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.