ಇಸ್ಲಾಮಾಬಾದ್: ಟಿಪ್ಪು ಸುಲ್ತಾನ್ ಸಂಸ್ಮರಣೆ ದಿನದಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟಿಪ್ಪುವಿಗೆ ಗೌರವ ಸೂಚಿಸಿದ್ದಾರೆ.
‘ಮೇ 4 ಟಿಪ್ಪು ಸುಲ್ತಾನ್ ಸಂಸ್ಮರಣೆ ದಿನ. ನಾನು ಟಿಪ್ಪುವಿಗೆಗೌರವ ಸಲ್ಲಿಸುತ್ತೇನೆ. ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿದ ಟಿಪ್ಪು ಗುಲಾಮನಾಗಿ ಬದುಕಲಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮನಾದ’ ಎಂದು ಇಮ್ರಾನ್ ಟ್ವೀಟ್ ಮಾಡಿದ್ದಾರೆ.
ಟಿಪ್ಪುವನ್ನುಇಮ್ರಾನ್ಖಾನ್ ಪ್ರಶಂಸಿಸಿದ್ದು ಇದೇ ಮೊದಲಲ್ಲ. ಫೆಬ್ರುವರಿಯಲ್ಲಿ ಪುಲ್ವಾಮ ದಾಳಿ ನಡೆದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದ ದಿನಗಳಲ್ಲಿ ಅವರು, ಸಂಸತ್ತಿನಲ್ಲಿ ಟಿಪ್ಪುವಿನ ಧೈರ್ಯವನ್ನು ಶ್ಲಾಘಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.