ADVERTISEMENT

ಕಾಶ್ಮೀರ ಸ್ಥಿತಿ: ವಿಶ್ವಸಂಸ್ಥೆಗೆ ಪಾಕ್‌ ವಿದೇಶಾಂಗ ಸಚಿವ ಝರ್ದಾರಿ ಪತ್ರ

ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ ಬಿಡುಗಡೆಗೆ ಭಾರತಕ್ಕೆ ಆಗ್ರಹಿಸಲು ಮನವಿ

ಪಿಟಿಐ
Published 25 ಮೇ 2022, 12:25 IST
Last Updated 25 ಮೇ 2022, 12:25 IST
ಬಿಲಾವಲ್‌ ಭುಟ್ಟೊ ಝರ್ದಾರಿ
ಬಿಲಾವಲ್‌ ಭುಟ್ಟೊ ಝರ್ದಾರಿ   

ಇಸ್ಲಾಮಾಬಾದ್‌:ಭಾರತ ಸರ್ಕಾರ ಕಾಶ್ಮೀರದಲ್ಲಿ ಜನರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ತಳ್ಳುತ್ತಿದೆ ಎಂದು ಆರೋಪಿಸಿಪಾಕಿಸ್ತಾನದ ವಿದೇಶಾಂಗ ಸಚಿವಬಿಲಾವಲ್‌ ಭುಟ್ಟೊ ಝರ್ದಾರಿ ಅವರು ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಷನರ್‌ ಮಿಚೆಲ್ ಬಚೆಲೆಟ್‌ ಅವರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಕಾಶ್ಮೀರದ ಪ್ರಸ್ತುತ ಸ್ಥಿತಿ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುವ ಪ್ರಯತ್ನದ ಭಾಗವಾಗಿ ಈ ಪತ್ರ ಬರೆಯಲಾಗಿದೆ ಎಂದು ತಿಳಿಸಿದೆ.

ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ ಅವರನ್ನು ಜೈಲಿನಿಂದ ತತ್‌ಕ್ಷಣವೇ ಬಿಡುಗಡೆಗೊಳಿಸಲು ಮತ್ತು ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕೈಬಿಡಲು ಭಾರತಕ್ಕೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.