ADVERTISEMENT

ಪ್ರಧಾನಿ ಮೋದಿ ‘ಬಂಗಬಂಧು‘ ಸ್ಮಾರಕಕ್ಕೆಭೇಟಿ, ಪುಷ್ಪ ನಮನ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 8:49 IST
Last Updated 27 ಮಾರ್ಚ್ 2021, 8:49 IST
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶೇಖ್‌ ಮುಜಿಬುರ್ ರಹಮಾನ್ ಅವರ ‘ಬಂಗಬಂಧು‘ ಸ್ಮಾರಕ್ಕೆ ಭೇಟಿ ನೀಡಿದ ಬಳಿಕ  ಸಂದರ್ಶಕರ ಪುಸ್ತಕದಲ್ಲಿ ಸಂದೇಶ ಬರೆದರು  ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶೇಖ್‌ ಮುಜಿಬುರ್ ರಹಮಾನ್ ಅವರ ‘ಬಂಗಬಂಧು‘ ಸ್ಮಾರಕ್ಕೆ ಭೇಟಿ ನೀಡಿದ ಬಳಿಕ  ಸಂದರ್ಶಕರ ಪುಸ್ತಕದಲ್ಲಿ ಸಂದೇಶ ಬರೆದರು  ಪಿಟಿಐ ಚಿತ್ರ   

ಢಾಕಾ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಾಂಗ್ಲಾದ ನೈರುತ್ಯ ಗೋಪಾಲ್‌ಗಂಜ್‌ ಜಿಲ್ಲೆಯ ತುಂಗಿಪಾರದಲ್ಲಿರುವ ಶೇಖ್‌ ಮುಜಿಬುರ್ ರಹಮಾನ್ ಅವರ ‘ಬಂಗಬಂಧು‘ ಸ್ಮಾರಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.

ಮುಜಿಬುರ್ ರಹಮಾನ್ ಅವರ ಪುತ್ರಿ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರಿಂದ ಪುಷ್ಪಗುಚ್ಚವನ್ನು ಪಡೆದ ಅವರು, ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಹಮಾನ್ ಅವರ ಕಿರಿಯ ಪುತ್ರಿಯೂ ಹಾಜರಿದ್ದರು.

ಕೋವಿಡ್‌ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿದ್ದ ಮೋದಿಯವರು ಬಂಗಬಂಧು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ, ಕೆಲವು ನಿಮಿಷ ಮೌನ ಆಚರಿಸಿದರು. ಇದಕ್ಕೂ ಮುನ್ನ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ಸ್ಮಾರಕಕ್ಕೆ ‘ಫಾತಿಹ‘ ಅರ್ಪಿಸಿದರು. ಪ್ರಧಾನಿ ನರೇಂದ್ರ ಮೋದಿ, ‘ಬಂಗಬಂಧು‘ ಸ್ಮಾರಕಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಗಣ್ಯರು.

ADVERTISEMENT

ಮೋದಿಯವರು ಸ್ಮಾರಕದ ಸಂಕಿರಣದಲ್ಲಿದ್ದ ‘ಸಂದರ್ಶಕರ ಪುಸ್ತಕ‘ದಲ್ಲಿ ಸಹಿ ಹಾಕಿ, ಪ್ರಾಂಗಣದಲ್ಲಿ ಗಿಡನೆಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.