ADVERTISEMENT

ಜರ್ಮನಿಯ ಕನ್ನಡ ಬಳಗದಿಂದ ‘ಎನ್‌ಎಸ್‌ಎಲ್‌ ನುಡಿ ನಮನ’

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 19:59 IST
Last Updated 25 ಮಾರ್ಚ್ 2021, 19:59 IST

ಬೆಂಗಳೂರು: ಜರ್ಮನಿಯ ಕನ್ನಡ ಬಳಗವು ಇತ್ತೀಚೆಗೆ ನಿಧನರಾದ ಕನ್ನಡದ ಹೆಸರಾಂತ ಕವಿ ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರನ್ನು ‘ಎನ್‌ಎಸ್‌ಎಲ್‌ ನುಡಿನಮನ’ ಆನ್‌ಲೈನ್‌ ಕಾರ್ಯಕ್ರಮದ ಮೂಲಕ ಸ್ಮರಿಸಿತು.

‘ಕಾರ್ಯಕ್ರಮದಲ್ಲಿ ಎನ್‌ಎಸ್‌ಎಲ್‌ ಅವರ ಜೀವನ ಮತ್ತು ಸಾಧನೆಗಳನ್ನು ಮೆಲುಕು ಹಾಕಲಾಯಿತು. ಜರ್ಮನಿಯಲ್ಲಿರುವ ಕನ್ನಡಿಗರು ಹಾಗೂ ಅವರ ಮಕ್ಕಳು ಭಾವಗೀತೆಗಳನ್ನು ಹಾಡಿದರು. ಕವನ ಮತ್ತು ಶಿಶು ಪದ್ಯಗಳನ್ನು ವಾಚಿಸಿದರು’ ಎಂದು ಕೆರ್ಪೆನ್‌ ನಗರದಲ್ಲಿ ನೆಲೆಸಿರುವ ಸಂತೋಷ್‌ ಶ್ರೀಧರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT