ಸಿಂಗಪುರ: ಕೋವಿಡ್ ಪಿಡುಗಿನ ವಿರುದ್ಧ ಹೋರಾಡುವ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಸಹಾಯ ಮಾಡಲೆಂದು ಸಿಂಗಪುರ ರೆಡ್ಕ್ರಾಸ್ (ಎಸ್ಆರ್ಸಿ) ಸುಮಾರು ₹38 ಕೋಟಿ ನೆರವು ನೀಡುತ್ತಿರುವುದಾಗಿ ಎಸ್ಆರ್ಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಿಇಒ ಬೆಂಜಮಿನ್ ವಿಲಿಯನ್ಸ್ ತಿಳಿಸಿದ್ದಾರೆ.
ಸಿಂಗಪುರ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಸಿಐಸಿಸಿಐ) ಮತ್ತು ಲಿಟಲ್ ಇಂಡಿಯನ್ ಶಾಪ್ಕೀಪರ್ಸ್ ಅಂಡ್ ಹೆರಿಟೇಜ್ ಅಸೋಸಿಯೇಷನ್ (ಲಿಶಾ) ಸಂಗ್ರಹಿಸಿದ ದೇಣಿಗೆಯ ₹ 5.50 ಕೋಟಿಯ ಚೆಕ್ ಅನ್ನೂ ಸ್ವೀಕರಿಸಿ ವಿಲಿಯಮ್ಸ್ ಮಾತನಾಡಿದರು.
‘ದಾನ ಮಾಡುವ ಹೃದಯ ಸಿಂಗಪುರದವರಿಗಿದೆ’ ಎಂದು ‘ಲಿಶಾ’ ಅಧ್ಯಕ್ಷ ಸಿ.ಶಂಕರನಾಥನ್ ತಿಳಿಸಿದರು.
ಎಸ್ಆರ್ಸಿ ಸಂಗ್ರಹಿಸಿರುವ ಮೊತ್ತವನ್ನು ಭಾರತದಲ್ಲಿರುವ ರೆಡ್ಕ್ರಾಸ್ ಮುಖ್ಯಸ್ಥರಿಗೆ ಕಳುಹಿಸುವುದಾಗಿ ವಿಲಿಯಮ್ಸ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.