ADVERTISEMENT

12 ಭಾರತೀಯ ಮೀನುಗಾರನ್ನು ಬಿಡುಗಡೆ ಮಾಡಿದ ಶ್ರೀಲಂಕಾ

ಪಿಟಿಐ
Published 4 ಜನವರಿ 2023, 12:27 IST
Last Updated 4 ಜನವರಿ 2023, 12:27 IST

ಕೊಲಂಬೊ:ಶ್ರೀಲಂಕಾದ ಉತ್ತರ ಸಮುದ್ರಕ್ಕೆ ಮರು ಪ್ರವೇಶಿಸದಂತೆ ಎಚ್ಚರಿಕೆ ನೀಡಿ ಬಂಧಿತ 12 ಭಾರತೀಯ
ಮೀನುಗಾರನ್ನು ಕಠಿಣ ಷರತ್ತನ್ನು ವಿಧಿಸಿ ನ್ಯಾಯಾಲಯ ಬಿಡುಗಡೆ ಮಾಡಿದೆ.

ಶ್ರೀಲಂಕಾದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 12 ಭಾರತೀಯ ಮೀನುಗಾರನ್ನು ಬಂಧಿಸಲಾಗಿತ್ತು.

ಶ್ರೀಲಂಕಾ ನೌಕಾಪಡೆಯ ನೆರವಿನೊಂದಿಗೆ ವಲಸೆ ಇಲಾಖೆಯ ಅಧಿಕಾರಿಗಳು ಮೀನುಗಾರರನ್ನು ಭಾರತೀಯ ಕರಾವಳಿ ಕಾವಲುಗಾರರಿಗೆ ಹಸ್ತಾಂತರಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.