ADVERTISEMENT

ತಾಲಿಬಾನ್‌ ದಾಳಿ: ಎಂಟು ಜನರ ಸಾವು

ಏಜೆನ್ಸೀಸ್
Published 30 ಜೂನ್ 2019, 19:30 IST
Last Updated 30 ಜೂನ್ 2019, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್‌:ದಕ್ಷಿಣ ಕಂದಹಾರ್‌ ಪ್ರಾಂತ್ಯದಲ್ಲಿ ಚುನಾವಣಾ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ತಾಲಿಬಾನ್‌ ಉಗ್ರರು ನಡೆಸಿದ ಬಾಂಬ್‌ ದಾಳಿಯಲ್ಲಿ, ಎಂಟು ನಾಗರಿಕರು ಮೃತಪಟ್ಟಿದ್ದಾರೆ.

‘ಮರುಫ್‌ ಜಿಲ್ಲೆಯಲ್ಲಿ ಚುನಾವಣಾಧಿಕಾರಿಗಳುಮತದಾರರ ನೋಂದಣಿ ಕಾರ್ಯ ನಡೆಸುತ್ತಿದ್ದರು. ಶನಿವಾರ ಈ ದಾಳಿ ನಡೆದಿದೆ’ಎಂದು ಚುನಾವಣಾ ಆಯೋಗದ ವಕ್ತಾರ ಅಜೀಜ್ ಇಬ್ರಾಹಿಮಿ ಹೇಳಿದ್ದಾರೆ.

‘ಕಳವು ಮಾಡಿದ ನಾಲ್ಕು ಸ್ಫೋಟಕ ವಾಹನಗಳನ್ನು, ಚುನಾವಣಾ ಅಧಿಕಾರಿಗಳು ತಂಗಿದ್ದ ಪೊಲೀಸ್ ಪ್ರಧಾನ ಕಚೇರಿಯ ಹೊರಗೆ ಸ್ಫೋಟಿಸಲಾಗಿದೆ’ಎಂದು ರಕ್ಷಣಾ ಸಚಿವಾಲಯದ ಉಪ ವಕ್ತಾರ ಫವಾದ್‌ ಅಮನ್‌ ತಿಳಿಸಿದ್ದಾರೆ.

ADVERTISEMENT

ತಾಲಿಬಾನ್ ವಕ್ತಾರ ಖಾರಿ ಯೂಸೌಫ್ ಅಹ್ಮದಿ, ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.