ಇನಾಯತ್ವುಲ್ಲಾ ಖವರ್ಝಾಮಿ
ಚಿತ್ರ: ಎಕ್ಸ್
ಇಸ್ಲಾಮಾಬಾದ್: ಭಾರತದ ಕ್ಷಿಪಣಿಯು ಅಫ್ಗಾನಿಸ್ತಾನಕ್ಕೆ ಅಪ್ಪಳಿಸಿದೆ ಎಂಬ ಪಾಕಿಸ್ತಾನದ ಹೇಳಿಕೆ ಸುಳ್ಳು ಮತ್ತು ಆಧಾರ ರಹಿತ ಎಂದು ತಾಲಿಬಾನ್ ನೇತೃತ್ವದ ಕಾಬುಲ್ ಸರ್ಕಾರ ಸ್ಪಷ್ಟಪಡಿಸಿದೆ.
‘ಅಫ್ಘಾನಿಸ್ತಾನ ಸಂಪೂರ್ಣ ಸುರಕ್ಷಿತ ಮತ್ತು ಸದೃಢವಾಗಿದೆ. ಅಂತಹ ಯಾವುದೇ ದಾಳಿ ನಡೆದಿಲ್ಲ. ಭಾರತ ಸಹ ಪಾಕಿಸ್ತಾನದ ಹೇಳಿಕೆಯು ನಗೆಪಾಟಲಿನಿಂದ ಕೂಡಿದೆ ಎಂದು ತಿಳಿಸಿದೆ ಎಂದು ಅಫ್ಘಾನ್ನ ರಕ್ಷಣಾ ಇಲಾಖೆ ವಕ್ತಾರ ಇನಾಯತ್ವುಲ್ಲಾ ಖವರ್ಝಾಮಿ ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌದ್ರಿ ‘ಭಾರತದ ಕ್ಷಿಪಣಿಯೊಂದು ಅಫ್ಗಾನಿಸ್ತಾನ ಪ್ರದೇಶಕ್ಕೆ ಅಪ್ಪಳಿಸಿದೆ’ ಎಂದು ಶನಿವಾರ ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.