ADVERTISEMENT

ವಿಶ್ವ ಸಂಸ್ಥೆ ಭದ್ರತಾ ಮಂಡಳಿ ದುರುಪಯೋಗ ಮಾಡಿಕೊಳ್ಳದಿರಿ: ಭಾರತ

ಅಮಾಯಕರಿಗೆ ಭಯೋತ್ಪಾದಕ ಪಟ್ಟಿ; ಪಾಕಿಸ್ತಾನದ ವಿಫಲ ಪ್ರಯತ್ನ ಉಲ್ಲೇಖಿಸಿದ ಭಾರತ

ಪಿಟಿಐ
Published 8 ಅಕ್ಟೋಬರ್ 2020, 7:00 IST
Last Updated 8 ಅಕ್ಟೋಬರ್ 2020, 7:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಪ್ರತೀಕಾರದಉದ್ದೇಶಕ್ಕಾಗಿ ವಿಶ್ವಾಸಾರ್ಹ ಪುರಾವೆಗಳಿಲ್ಲದೇ ಅಮಾಯಕ ನಾಗರಿಕರನ್ನು ಭಯೋತ್ಪಾದಕರೆಂದು ಬಿಂಬಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಯಾವ ರಾಷ್ಟ್ರಗಳೂ ದುರುಪಯೋಗ ಮಾಡಿಕೊಳ್ಳಬಾರದು ಎಂದು ಭಾರತ ಹೇಳಿದೆ.

ನಾಲ್ವರು ಭಾರತೀಯರನ್ನು 'ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಅಲ್‌ಖೈದಾ ನಿರ್ಬಂಧ ಸಮಿತಿ' ಅಡಿಯಲ್ಲಿ ಭಯೋತ್ಪಾದಕರೆಂದು ಬಿಂಬಿಸುವಲ್ಲಿ ವಿಫಲವಾದ ಪಾಕಿಸ್ತಾನದ ಪ್ರಯತ್ನವನ್ನು ಭಾರತ ಉಲ್ಲೇಖಿಸಿ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಭಾರತೀಯರಾದ ಅಂಗಾರ ಅಪ್ಪಾಜಿ, ಗೊಬಿಂಡ ಪಟ್ನಾಯಕ್, ಅಜಯ್‌ ಮಿಸ್ತ್ರಿ ಮತ್ತು ವೇಣುಮಾಧವ್ ಡೋಂಗರಅವರ ಹೆಸರನ್ನು '1267 ಅಲ್‌ಖೈದಾ ನಿರ್ಬಂಧಿತ ಸಮಿತಿ' ಅಡಿಯಲ್ಲಿ ಪಟ್ಟಿ ಮಾಡಿವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿತ್ತು.

ADVERTISEMENT

ಆದರೆ, ಕಳೆದ ತಿಂಗಳು ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ ಮತ್ತು ಬೆಲ್ಜಿಯಂ ರಾಷ್ಟ್ರಗಳು ಅಪ್ಪಾಜಿ ಮತ್ತು ಪಟ್ನಾಯಕ್ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವ ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಿದ್ದವು.ಮೂಲಗಳ ಪ್ರಕಾರ, ಪಾಕಿಸ್ತಾನವು ಈ ಪ್ರಕರಣದಲ್ಲಿ ವ್ಯಕ್ತಿಗಳನ್ನು ಪಟ್ಟಿ ಮಾಡಲು ಯಾವುದೇ ಪುರಾವೆಗಳನ್ನು ನೀಡಿಲ್ಲ. ಅದೇ ರೀತಿ, ಮಿಸ್ತ್ರಿ ಮತ್ತು ಡೊಂಗರ ಅವರನ್ನು ಪಟ್ಟಿ ಮಾಡುವ ಪಾಕಿಸ್ತಾನದ ಹಿಂದಿನ ಪ್ರಯತ್ನವನ್ನೂ ಕೌನ್ಸಿಲ್ ಜೂನ್ / ಜುಲೈ ಆಸುಪಾಸಿನಲ್ಲಿ ನಿರ್ಬಂಧ ವಿಧಿಸಿತ್ತು.

ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್‌ನ ಮೊದಲ ಕಾರ್ಯದರ್ಶಿ ಮತ್ತು ಕಾನೂನು ಸಲಹೆಗಾರ ಯೆಡ್ಲಾ ಉಮಾಶಂಕರ್ ಯುಎನ್‌ ಸಾಮಾನ್ಯ ಸಭೆಯ 6ನೇ ಸಮಿತಿ ಸಭೆಯಲ್ಲಿ ‘ಅಂತರರಾಷ್ಟ್ರೀಯ ಭಯೋತ್ಪಾದನೆ ನಿರ್ಮೂಲನೆಗಾಗಿ ಪರಿಹಾರಗಳು‘ ಕುರಿತು ಮಾತನಾಡಿ, ‘ ತಮ್ಮ ಪ್ರತೀಕಾರಕ್ಕಾಗಿ ಯಾವುದೇ ರಾಷ್ಟ್ರಗಳು ಪುರಾವೆಗಳಿಲ್ಲದೇ ಅಮಾಯಕರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವುದಿಲ್ಲ ಎಂಬುದನ್ನು ಖಚಿತಪಡಿಸಬೇಕು. ಈ ವಿಚಾರದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಬೇಕು‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.