ADVERTISEMENT

ತಮಿಳರ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಿ- ಟಿಎನ್ಎ ಪಕ್ಷ ಒತ್ತಾಯ

ಪಿಟಿಐ
Published 30 ಮಾರ್ಚ್ 2022, 11:04 IST
Last Updated 30 ಮಾರ್ಚ್ 2022, 11:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ: ತಮಿಳು ನಾಗರಿಕರ ಹಕ್ಕುಗಳ ಕುರಿತಾದ ಸರ್ಕಾರದ 'ಅರ್ಧ ಸತ್ಯ'ದ ರಾಜಕೀಯ ಪರಿಹಾರವನ್ನು ಶ್ರೀಲಂಕಾದ ಪ್ರಮುಖ ತಮಿಳು ಪಕ್ಷ ಟಿಎನ್ಎ ಎಂದಿಗೂ ಒಪ್ಪದು ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ತಮಿಳರು ಎದುರಿಸುತ್ತಿರುವ ಸವಾಲುಗಳ ಪರಿಹಾರಕ್ಕಾಗಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ತಮಿಳ್ ನ್ಯಾಷನಲ್ ಅಲಾಯನ್ಸ್ ಪಕ್ಷದ ನಿಯೋಗದ ಜತೆ ಸಭೆ ನಡೆಸಿದರು. ಈ ಸಭೆ ಬಳಿಕ ಟಿಎನ್ಎ ನಾಯಕ ಆರ್ ಸಂಪಂಥನ್ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಸಂವಿಧಾನದ 13ನೇ ತಿದ್ದುಪಡಿಗೆ ಹೆಚ್ಚು ಅಧಿಕಾರಿಗಳನ್ನು ನೀಡುವ ಮೂಲಕ ತಮಿಳರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT