ADVERTISEMENT

ಕ್ಷಮೆ ಯಾಚಿಸಿದ ಝಾಕಿರ್‌ ನಾಯ್ಕ್‌

ಏಜೆನ್ಸೀಸ್
Published 20 ಆಗಸ್ಟ್ 2019, 19:46 IST
Last Updated 20 ಆಗಸ್ಟ್ 2019, 19:46 IST
ಝಾಕಿರ್‌ ನಾಯ್ಕ್‌
ಝಾಕಿರ್‌ ನಾಯ್ಕ್‌   

ಕ್ವಾಲಾಲಂಪುರ: ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ್‌ ತಮ್ಮ ಪ್ರಚೋದನಾತ್ಮಕ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.

‘ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಹೊಂದಿರುವುದಕ್ಕಿಂತ ನೂರು ಪಟ್ಟು ಹೆಚ್ಚು ಹಕ್ಕುಗಳನ್ನು ಮಲೇಷ್ಯಾದಲ್ಲಿರುವ ಹಿಂದೂಗಳು ಹೊಂದಿದ್ದಾರೆ. ತಮ್ಮನ್ನು ಗಡಿಪಾರು ಮಾಡುವ ಮೊದಲು ಚೀನೀ ಮಲೇಷ್ಯನ್ನರನ್ನು ಹೊರ ಹಾಕಬೇಕು’ ಎನ್ನುವ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ್‌ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.

‘ನನ್ನ ಹೇಳಿಕೆಯನ್ನು ಬೇರೆಯದೇ ರೀತಿ ಅರ್ಥೈಸಲಾಗುತ್ತಿದೆ. ಯಾವುದೇ ವ್ಯಕ್ತಿ, ಸಮುದಾಯಕ್ಕೆ ನೋವುಂಟು ಮಾಡುವ ಉದ್ದೇಶ ಇರಲಿಲ್ಲ. ನನ್ನ ಹೇಳಿಕೆಗೆ ಹೃದಯಪೂರ್ವಕವಾಗಿ ಕ್ಷಮೆ ಕೋರುತ್ತೇನೆ’ ಎಂದು ನಾಯ್ಕ್‌ ಹೇಳಿದ್ದಾರೆ.

ADVERTISEMENT

ಕ್ಷಮೆ ಯಾಚಿಸುವ ಮೊದಲು ನಾಯ್ಕ್ ಪೊಲೀಸ್ ಮುಖ್ಯ ಕಚೇರಿಯಲ್ಲಿ 10 ತಾಸು ವಿಚಾರಣೆ ಎದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.