ವೈಭವಪೂರ್ಣ ಜಂಬೂಸವಾರಿ
ಮೈಸೂರು, ಅ. 9- ಮೆರವಣಿಗೆಯ ಮೂರು ಮೈಲಿಗಳ ಹಾದಿಯುದ್ದಕ್ಕೂ ಕಿಕ್ಕಿರಿದು ತುಂಬಿದ ಐದು ಲಕ್ಷಕ್ಕೂ ಹೆಚ್ಚು ಮಂದಿ, ಜಗತ್ಪ್ರಸಿದ್ಧ ಹಾಗೂ ವೈಭವಯುತ ಜಂಬೂಸವಾರಿಯನ್ನು ಇಂದು ಇಲ್ಲಿ ವೀಕ್ಷಿಸಿ ತಮ್ಮ ಅಪಾರ ಮೆಚ್ಚಿಗೆ, ಆನಂದವನ್ನು ವ್ಯಕ್ತಪಡಿಸಿದರು.
ಶರಾವತಿ ಪ್ರಗತಿ ಪರಿಶೀಲಿಸಲು ತಜ್ಞರ ತಂಡ
ಬೆಂಗಳೂರು, ಅ. 9- ಶರಾವತಿ ವಿದ್ಯುತ್ ಯೋಜನೆಯ ಕಾರ್ಯಾಚರಣೆಯನ್ನು ಪರಿಶೀಲಿಸಲು ಯೋಜನಾ ಮಂಡಳಿ ನಿಯೋಜಿಸಿರುವ 3 ಮಂದಿ ತಜ್ಞರ ತಂಡಕ್ಕೆ ಸೇರಿದ ಶ್ರೀ ಎಂ.ಕೆ. ಮತ್ರಾಣಿ ಮತ್ತು ಎಸ್.ಎನ್. ಕಪೂರ್ ಅವರು ಇಂದು ನಗರಕ್ಕೆ ಆಗಮಿಸಿದರು.
ಈ ಇಬ್ಬರು ತಜ್ಞರು, ರಾಜ್ಯದ ಜಲವಿದ್ಯುತ್ ನಿರ್ಮಾಣ ಯೋಜನೆ ಬೋರ್ಡಿನ ಸದಸ್ಯರಾದ ಶ್ರೀ ಎನ್.ಎನ್. ಅಯ್ಯಂಗಾರ್ ಅವರು ಯೋಜನೆ ಸ್ಥಳಕ್ಕೆ ಭೇಟಿ ಕೊಡುವ ಮುನ್ನ ಮುಖ್ಯಮಂತ್ರಿ ಮತ್ತಿತರರೊಡನೆ ಮಾತುಕತೆ ನಡೆಸುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.