ADVERTISEMENT

ಮಂಗಳವಾರ, 20-9-1961

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ದೇಶದ ಹಳ್ಳಿಗಳಿಗೆಲ್ಲ ಮೂಲ ಸೌಲಭ್ಯಗಳು
ನವದೆಹಲ್ಲಿ, ಸೆ. 19
- ತೃತೀಯ ಯೋಜನೆ ಅಂತ್ಯದ ವೇಳೆಗೆ ಭಾರತದ ಯಾವುದೇ ಗ್ರಾಮದಲ್ಲಿಯೂ ಕುಡಿಯುವ ನೀರಿನ ಕೊರತೆ ಇರದೆಂದೂ, ಪ್ರತಿಯೊಂದು ಗ್ರಾಮದಲ್ಲಿಯೂ ಒಂದು ಪ್ರಾಥಮಿಕ ಶಾಲೆ ಹಾಗೂ ಹೊರಗಿನಿಂದ ಅಲ್ಲಿಗೆ ಬರಲು ಒಂದು ರಸ್ತೆ ಇರುತ್ತದೆಂದೂ ಇಂದು ಇಲ್ಲಿ ಪ್ರಕಟವಾದ ಕಾಂಗ್ರೆಸ್ ಪಕ್ಷದ ಕರಡು ಚುನಾವಣಾ ಪ್ರಣಾಳಿಕೆ ಆಶ್ವಾಸನೆ ನೀಡಿದೆ.

ಶರಾವತಿಯಲ್ಲಿ 62 ರಲ್ಲೇ ವಿದ್ಯುಚ್ಛಕ್ತಿಯ ಉತ್ಪಾದನೆ
ಬೆಂಗಳೂರು, ಸೆ. 19
-  ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಅಭಾವ ನಿವಾರಣೆಗಾಗಿ ಜನರು ಆತುರದಿಂದ ಎದುರು ನೋಡುತ್ತಿರುವ ಶರಾವತಿ ಯೋಜನೆಯಲ್ಲಿ 1962ರ ಡಿಸೆಂಬರ್ ಅಂತ್ಯದೊಳಗೆ ವಿದ್ಯುಚ್ಛಕ್ತಿ ಉತ್ಪಾದನೆಯನ್ನು ಆರಂಭಿಸಬೇಕೆಂಬ ರಾಜ್ಯ ಸರಕಾರದ ಉದ್ದೇಶದ ಈಡೇರಿಕೆ ಅಸಾಧ್ಯವಾಗದು ಎಂದು ಆಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.