
ಪ್ರಜಾವಾಣಿ ವಾರ್ತೆಯಾಂತ್ರೀಕೃತ ಕೃಷಿ ಕ್ಷೇತ್ರಗಳ ಸ್ಥಾಪನೆಗೆ ಶಿಫಾರಸು
ನವದೆಹಲಿ, ಮಾ. 10 - ದೊಡ್ಡ ಪ್ರಮಾಣದ ಕೃಷಿ ಕ್ಷೇತ್ರಗಳ ಬಗ್ಗೆ ನೇಮಕವಾಗಿದ್ದ ದಾಮ್ಲೆ ಸಮಿತಿಯು ಯಾಂತ್ರೀಕೃತ ಬೃಹತ್ ಕೃಷಿ ಕ್ಷೇತ್ರಗಳ ಸ್ಥಾಪನೆಗೆ ಬೆಂಬಲವಿತ್ತಿದೆ. ಇದು ಲಾಭದಾಯಕವೆಂದೂ ಸಮಿತಿ ಅಭಿಪ್ರಾಯಪಟ್ಟಿದೆ.
ಕಾಂಗೋಗೆ ಭಾರತದ ಯುದ್ಧ ಪಡೆ
ನವದೆಹಲಿ, ಮಾ. 10 - ವಿಶ್ವರಾಷ್ಟ್ರಸಂಸ್ಥೆ ಕಾರ್ಯಾಚರಣೆಗೆ ಬೆಂಬಲ ನೀಡಲು ಕಾಂಗೋಗೆ ಕಳುಹಿಸಲಾಗಿರುವ ಭಾರತದ ಮಿಲಿಟರಿ ತಂಡದಲ್ಲಿ 2886 ಯುದ್ಧ ಸೈನಿಕರೂ ಸೇರಿ ಒಟ್ಟು ಸುಮಾರು ಐದು ಸಾವಿರ ಸೈನಿಕರಿರುತ್ತಾರೆಂದು ರಕ್ಷಣಾ ಸಚಿವ ಶ್ರೀ ವಿ. ಕೆ. ಕೃಷ್ಣಮೆನನ್ ಇಂದು ಇಲ್ಲಿ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.