
ಪ್ರಜಾವಾಣಿ ವಾರ್ತೆಕೌಪೀನಧಾರಿ ಮಾಜಿ ಪ್ರಧಾನಿ
ಕೊಲಂಬೊ, ಡಿ. 19 – ಪಾರ್ಲಿಮೆಂಟ್ ಸದಸ್ಯರಿಗಾಗಿ ಮೀಸಲಾದ ‘ಕ್ರಾವಸ್ತಿ’ ಹಾಸ್ಟೆಲ್ನಲ್ಲಿ ನಿನ್ನೆ ರಾತ್ರಿ ಮಾಜಿ ಪ್ರಧಾನ ಮಂತ್ರಿಯೊಬ್ಬರು ಕರವಸ್ತ್ರದಷ್ಟು ಅಗಲದ ಬಟ್ಟೆಯನ್ನು ಮಾತ್ರ ಧರಿಸಿಕೊಂಡು ಕಾಣಿಸಿಕೊಂಡರು.
‘ಸಿಂಹಳದಲ್ಲಿ ಅಗ್ಗದ ಹತ್ತಿಬಟ್ಟೆ ಅಭಾವವಿರುವುದರತ್ತ ಸರ್ಕಾರದ ಗಮನ ಸೆಳೆಯಲು ಇದೊಂದೇ ಹಾದಿ’ ಎಂದು ಈ ‘ಕೌಪೀನಧಾರಿ’ ಶ್ರೀ ವಿಜಯಾನಂದ ದಹನಾಯಕೆ ವಿವರಿಸಿದರು.
ಸಚಿವೆ ಗೈರು ಹಾಜರಿ ಪ್ರಸ್ತಾಪ
ಬೆಂಗಳೂರು, ಡಿ. 19 – ಸಮಾಜ ಕಲ್ಯಾಣ ಸಚಿವೆ ಶ್ರೀಮತಿ ಯಶೋಧರ ದಾಸಪ್ಪ ಅವರು ಕಳೆದ ಕೆಲವು ದಿನಗಳಿಂದ ಸಭೆಗೆ ಹಾಜರಾಗುತ್ತಿಲ್ಲದಿರುವುದನ್ನು ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರಸ್ತಾಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.