ADVERTISEMENT

ಸೋಮವಾರ, 3-10-1961

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 19:30 IST
Last Updated 2 ಅಕ್ಟೋಬರ್ 2011, 19:30 IST

ಯೋಗಿರಾಜ್ ಸೂರ್ಯದೇವ್ ಅವರ ಉಪವಾಸ ಮುಕ್ತಾಯ
ಅಮೃತಸರ, ಅ. 2 -
  ತಾರಾಸಿಂಗರು ಉಪವಾಸ ನಿಲ್ಲಿಸಿದ 24 ಗಂಟೆಗಳ ಬಳಿಕ ತಮ್ಮ ನಿರಶನ ವ್ರತ ಅಂತ್ಯಗೊಳಿಸುವುದಾಗಿ ತಿಳಿಸಿದ ಶ್ರೀ ಯೋಗಿರಾಜ್ ಸೂರ್ಯದೇವ್‌ರವರು 49 ದಿನಗಳ ತಮ್ಮ ಉಪವಾಸವನ್ನು ಇಂದು ಇಲ್ಲಿ ಅಂತ್ಯಗೊಳಿಸಿದರು.

ಅಕಾಲಿದಳದ ಬೇಡಿಕೆಯಾದ ಪಂಜಾಬಿ ಸುಬಾ ಬೇಡಿಕೆಯನ್ನು ವಿರೋಧಿಸಿ ಪ್ರತಿ ಉಪವಾಸ ಆರಂಭಿಸಿದ್ದ ಶ್ರೀ ಯೋಗಿರಾಜರು ಇಂದು ಸಂಜೆ 7 ಗಂಟೆಗೆ `ಪಂಚಾಮೃತ~ವನ್ನು ಸೇವಿಸುವುದರ ಮೂಕ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.

1 ತಿಂಗಳಲ್ಲಿ ನಗರದ ಸಮಗ್ರ ಯೋಜನೆಗೆ ತಜ್ಞರ ಸಮಿತಿ
ಬೆಂಗಳೂರು, ಅ. 2 -
  ಬೆಂಗಳೂರು ನಗರದ ಬೆಳವಣಿಗೆಯು ನಿರ್ದಿಷ್ಟ ಯೋಜನೆಯಂತೆ ನಡೆಯಲು ಸಮಗ್ರ ಯೋಜನೆ ತಯಾರಿಸುವುದಾಗಿ ತಜ್ಞರ ಸಮಿತಿ `ಹೆಚ್ಚೆಂದರೆ ಒಂದು ತಿಂಗಳೊಳಗೆ~ ರಚಿಸುವುದಾಗಿ ಗೃಹ ಸಚಿವ ಶ್ರೀ ಎಚ್. ಎಂ. ಚನ್ನಬಸಪ್ಪನವರು ಇಂದು ಭರವಸೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.