ಕಾಶ್ಮೀರ: ಚರ್ಚೆಗೆ ಬೆನಜೀರ್ ಒಲವು
ಇಸ್ಲಾಮಾಬಾದ್, ಜೂನ್ 19 (ಪಿಟಿಐ)– ಪಾಕಿಸ್ತಾನವು ಇಂದು ಮತ್ತೆ
ತನ್ನ ನಿಲುವನ್ನು ಬದಲಿಸಿದೆ. ‘ಕಾಶ್ಮೀರ ಸಮಸ್ಯೆ ಕುರಿತು ಭಾರತ ಮತ್ತು
ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದರೆ ಶೀಘ್ರ ಪರಿಹಾರ ಕಂಡು ಹಿಡಿಯಬಹುದು’ ಎಂದು ಪಾಕಿಸ್ತಾನದ ಪ್ರಧಾನಿ ಬೆನಜೀರ್ ಭುಟ್ಟೊ ಅವರು ಇಂದು ಹೇಳಿದ್ದಾರೆ.
‘ಭಾರತ–ಪಾಕಿಸ್ತಾನ ನಡುವೆ ಹಿಂದೆ ನಡೆದ ಮಾತುಕತೆಗಳು ವಿಫಲವಾಗಿವೆ. ಆದರೆ ನಾವು ಒಳ್ಳೆಯ ಉದ್ದೇಶ ಹೊಂದಿದ್ದೇವೆ. ಭಾರತದ ಹೊಸ ಸರ್ಕಾರವೂ ತನ್ನ ಇತ್ತೀಚಿನ ಪತ್ರದಲ್ಲಿ ಉತ್ತಮ ಪ್ರತಿಕ್ರಿಯೆ ತೋರಿದೆ’ ಎಂದೂ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.