ಸಂತೆ ಹೊಂಡ ದುರಂತ: ಬಸ್ ಮೇಲೆತ್ತಲು ಫಲಿಸದ ಯತ್ನ
ಚಿತ್ರದುರ್ಗ, ಅ. 24– ಇಪ್ಪತ್ನಾಲ್ಕು ಗಂಟೆಗಳ ಅವ್ಯಾಹತ ಪ್ರಯತ್ನದ ನಂತರವೂ, ಸಂತೆ ಹೊಂಡದಲ್ಲಿ 60ಕ್ಕೂ ಹೆಚ್ಚು ಜನರಸಮೇತ ಮುಳುಗಿರುವ ಬಸ್ಸನ್ನು ಮೇಲೆತ್ತಲು ಇನ್ನೂ ಸಾಧ್ಯವಾಗಿಲ್ಲ. ನೌಕಾಪಡೆಯ ತಂಡಕ್ಕಾಗಿ ಕಾಯಲಾಗುತ್ತಿದ್ದು, ದುರಂತದ ಸ್ಥಳದಲ್ಲಿ ದುಃಖತಪ್ತ ಕುಟುಂಬದವರ ಸಹಿತ ಸಾವಿರಾರು ಜನರು ಸೇರಿದ್ದಾರೆ.
ಬಸ್ಸನ್ನು ಮೇಲೆತ್ತಲು ನೆರೆದಿರುವ ಜನರಿಂದ ಅವ್ಯಾಹತ ಪ್ರಯತ್ನಗಳು ಸಾಗಿವೆ. ನೌಕಾಪಡೆಯ ತಂಡದ ಈಜುಗಾರರು (ಡೈವರ್ಸ್) ರಾತ್ರಿ ವೇಳೆಗೆ ಇಲ್ಲಿಗೆ ತಲುಪುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.