ADVERTISEMENT

25 ವರ್ಷಗಳ ಹಿಂದೆ | ಬುಧವಾರ 3, ಮೇ 1995

​ಪ್ರಜಾವಾಣಿ ವಾರ್ತೆ
Published 2 ಮೇ 2020, 21:11 IST
Last Updated 2 ಮೇ 2020, 21:11 IST

ಬಡ್ಡಿ ಮನ್ನಾದಿಂದ ರೈತರ ಹಿತಕ್ಕೆ ಧಕ್ಕೆ–ಮನಮೋಹನ್‌

ನವದೆಹಲಿ, ಮೇ 2– ಸಾಲ ವ್ಯವಸ್ಥೆ ಮತ್ತು ಸಾಲ ಮರುಪಾವತಿ ನೀತಿಯನ್ನು ದುರ್ಬಲಗೊಳಿಸುವ ಯಾವುದೇ ಕ್ರಮವನ್ನು ಸರ್ಕಾರ ಕೈಗೊಳ್ಳದು. ಈ ವ್ಯವಸ್ಥೆಯನ್ನು ಬದಿಗೊತ್ತಿ ಸಾಲ ಅಥವಾ ಬಡ್ಡಿ ಮನ್ನಾ ಮಾಡುವುದರಿಂದ ಕೃಷಿಕರ ಹಿತಕ್ಕೆ ಅಂತಿಮವಾಗಿ ಹಾನಿಯಾಗುವುದು ಎಂದು ಹಣಕಾಸು ಸಚಿವ ಡಾ.ಮನಮೋಹನ್‌ ಸಿಂಗ್‌ ಅವರು ಇಂದು ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿನ ಸಹಕಾರಿ ಸಂಸ್ಥೆಗಳಿಗೆ ನಬಾರ್ಡ್‌ ಪುನರ್‌ಧನ ನಿಲ್ಲಿಸಿದ ಸಂಬಂಧ ಕಾಂಗ್ರೆಸ್ಸಿನ ಕೆ.ರೆಹಮಾನ್‌ ಖಾನ್‌ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ಬಡ್ಡಿ ಮನ್ನಾ ಕ್ರಮವು ಬ್ಯಾಂಕ್‌ ವ್ಯವಹಾರ ನೀತಿನಿಯಮಗಳಿಗೆ ವಿರುದ್ಧವಾಗಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.