ಮಾತುಕತೆಗೆ ಬೆನಜೀರ್ ಆಸಕ್ತಿ
ಕಠ್ಮಂಡು, ಮೇ 26 (ಯುಎನ್ಐ)– ಕಾಶ್ಮೀರ ಬಿಕ್ಕಟ್ಟು ಸೇರಿದಂತೆ ದೆಹಲಿ ಹಾಗೂ ಇಸ್ಲಾಮಾಬಾದ್ ಮಧ್ಯೆ ಇರುವ ವಿವಾದಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಭಾರತದ ಜೊತೆ ಮಾತುಕತೆ ನಡೆಸಲು ಪಾಕ್ ಪ್ರಧಾನಿ ಬೆನಜೀರ್ ಭುಟ್ಟೊ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಭಾರತ ವಿರೋಧಕ್ಕೆ ಸೋಲು
ವಾಷಿಂಗ್ಟನ್, ಮೇ 26 (ಯುಎನ್ಐ)– ಭಾರತವು ಪಂಜಾಬ್ ಹಾಗೂ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ನಡೆಸಿದೆ ಎಂದು ಆರೋಪಿಸಿ ಅಮೆರಿಕ ಕಾಂಗ್ರೆಸ್ನ ಕೆಲವು ಸದಸ್ಯರು ತರಲೆತ್ನಿಸಿದ ತಿದ್ದುಪಡಿಯನ್ನು ಸದನ ಸಮಿತಿ ತಳ್ಳಿಹಾಕಿದ್ದರಿಂದ, ಭಾರತ ವಿರೋಧಿ ಲಾಬಿಗೆ ಭಾರಿ ಮುಖಭಂಗವಾಗಿದೆ.
ಕುಂದದ ರೇಖಾ ಆಕರ್ಷಣೆ
ನವದೆಹಲಿ, ಮೇ 26 (ಯುಎನ್ಐ)– ಚಿತ್ರತಾರೆ ರೇಖಾ ಈಗಲೂ ಜನರ ಆಕರ್ಷಣೆ ಕೇಂದ್ರವಾಗಿದ್ದಾರೆ ಎಂದು ದೂರದರ್ಶನದ ಸಮೀಕ್ಷೆಯೊಂದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.