ಅಕ್ರಮ ಸ್ಫೋಟಕ ಸಂಗ್ರಹ ಸಿಡಿದು ಆರು ಮಂದಿ ಸಾವು
ಬೆಂಗಳೂರು, ಮಾರ್ಚ್ 18– ಬಂಡೆಗಳನ್ನು ಸಿಡಿಸುವ ಸ್ಫೋಟಕಗಳನ್ನು ಮನೆಯಲ್ಲಿ ಸಂಗ್ರಹಿ ಸುತ್ತಿದ್ದಾಗ ಅವು ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ನಗರದ ಹೊರವಲಯದ ದೊಡ್ಡಬೇಗೂರಿನಲ್ಲಿ ಇಂದು ಸಂಜೆ ನಡೆದಿದೆ.
ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ದೊಡ್ಡಬೇಗೂರಿನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಅಬ್ರಹಾಂ ಸುತ್ತಮುತ್ತಮುತ್ತಲ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಗೆ ಬಂಡೆ ಸಿಡಿಸುವ ಸ್ಫೋಟಕ ಒದಗಿಸುತ್ತಿದ್ದ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.