ಕೃಷ್ಣಾ 2ನೇ ಹಂತಕ್ಕೆ ಅನುಮತಿಗೆ ಮನವಿ
ನವದೆಹಲಿ, ನ. 15– ಕೃಷ್ಣಾ ನದಿ ನೀರಿನ ಬಗೆಗೆ ಬಚಾವತ್ ಆಯೋಗ ನೀಡಿರುವ ತೀರ್ಪಿನಂತೆ, ಎರಡು ಸಾವಿರ ಇಸವಿಯೊಳಗೆ ಕರ್ನಾಟಕವು ತನ್ನ ಪಾಲಿನ ನೀರಿನ ಬಳಕೆಯನ್ನು ಮಾಡಿಕೊಳ್ಳಲು ಸಹಾಯವಾಗುವಂತೆ ಕೃಷ್ಣಾ ಮೇಲ್ದಂಡೆ ಎರಡನೇ ಹಂತದ ಯೋಜನೆಗಳಿಗೆ ಅನುಮತಿ ನೀಡಬೇಕೆಂದು ಕರ್ನಾಟಕದ ಭಾರಿ ನೀರಾವರಿ ಸಚಿವ ಕೆ.ಎನ್. ನಾಗೇಗೌಡ ಅವರು ಯೋಜನಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಚುನಾವಣೆ ಸುಧಾರಣೆಗಳ ಚರ್ಚೆಗೆ ವಿಶೇಷ ಅಧಿವೇಶನ
ಕಲ್ಕತ್ತ, ನ. 15– ಚುನಾವಣಾ ಸುಧಾರಣೆಗಳ ಕುರಿತ ಸಮಗ್ರ ಅಧ್ಯಯನ ವರದಿಯೊಂದನ್ನು ಲೋಕಸಭಾಧ್ಯಕ್ಷ ಪಿ.ವಿ. ಸಂಗ್ಮಾ ಅವರು ಸಿದ್ಧಪಡಿಸುತ್ತಿದ್ದು, ಈ ಕುರಿತು ಚರ್ಚೆ ನಡೆಸಲು ಶೀಘ್ರದಲ್ಲಿ ಸಂಸತ್ತಿನ ಎರಡು ದಿನಗಳ ವಿಶೇಷ ಅಧಿವೇಶನ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.