ADVERTISEMENT

25 ವರ್ಷಗಳ ಹಿಂದೆ: ಗುರುವಾರ 30-5-1996

​ಪ್ರಜಾವಾಣಿ ವಾರ್ತೆ
Published 29 ಮೇ 2021, 21:13 IST
Last Updated 29 ಮೇ 2021, 21:13 IST
   

ಸ್ಪರ್ಧೆಯಲ್ಲಿ ಸಿದ್ದರಾಮಯ್ಯ, ಪಟೇಲ್‌
ಬೆಂಗಳೂರು, ಮೇ 29– ಪ್ರಧಾನಿಯಾಗಿ ನಿಯೋಜಿತರಾಗಿರುವ ಎಚ್.ಡಿ. ದೇವೇಗೌಡರು ತೆರವು ಮಾಡಲಿರುವ ಮುಖ್ಯಮಂತ್ರಿ ಪಟ್ಟಕ್ಕೆ ಏರಲು ಹಲವು ಸಚಿವ ಗಣ್ಯರು ಪೈಪೋಟಿಯನ್ನು ನಡೆಸಿದ್ದು, ರಾಜಧಾನಿಯಲ್ಲಿನ ರಾಜಕೀಯ ಚಟುವಟಿಕೆ ಒಮ್ಮೆಗೇ ಚುರುಕುಗೊಂಡಿದೆ.

ದಳ ಶಾಸಕಾಂಗದ ನೂತನ ನಾಯಕರಾಗಿ ಯಾರು ಆಯ್ಕೆ ಆಗಲಿದ್ದಾರೆ ಎನ್ನುವುದು ಈ ನಿಮಿಷದವರೆಗೂ ನಿಗೂಢವಾಗಿದೆ. ಆದರೆ, ಉಪಮುಖ್ಯಮಂತ್ರಿ ಜೆ.ಎಚ್‌. ಪಟೇಲ್, ಅರ್ಥ ಸಚಿವ ಸಿದ್ದರಾಮಯ್ಯ ಅವರ ನಡುವೆ ಈ ಹುದ್ದೆಗಾಗಿ ಪ್ರಬಲ ಪೈಪೋಟಿ ಸಾಗಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT