ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಸೋಮವಾರ 22.4.1996

25 ವರ್ಷಗಳ ಹಿಂದೆ ಸೋಮವಾರ 22.4.1996

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 19:30 IST
Last Updated 21 ಏಪ್ರಿಲ್ 2021, 19:30 IST
   

ಶೀಲಾ ಕೌಲ್ ರಾಜೀನಾಮೆ

ಶಿಮ್ಲಾ, ಏ. 21 (ಯುಎನ್‌ಐ)– ವಸತಿ ಹಗರಣದ ಸಂಬಂಧ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯದ ಹಿನ್ನೆಲೆಯಲ್ಲಿ, ಹಿಮಾಚಲ ಪ್ರದೇಶದ ರಾಜ್ಯಪಾಲೆ ಆಗಿರುವ ಶೀಲಾ ಕೌಲ್ ಅವರು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದರು.

ರಾಜೀನಾಮೆ ವಿಷಯವನ್ನು ಅವರು ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಅವರಿಗೆ ಫ್ಯಾಕ್ಸ್ ಮಾಡುವ ಮೂಲಕ, ಕಳೆದ ಐದು ದಿನಗಳಿಂದ ಇದ್ದ ಅಸ್ಥಿರತೆಗೆ ಇಂದು ಇತಿಶ್ರೀ ಹಾಡಿದ್ದಾರೆ.

ADVERTISEMENT

ದೆಹಲಿ ಸ್ಫೋಟ: 17 ಜನರ ಸಾವು

ನವದೆಹಲಿ, ಏ. 21 (ಪಿಟಿಐ, ಯುಎನ್ಐ)– ಮಧ್ಯ ದೆಹಲಿಯ ಹೋಟೆಲೊಂದರಲ್ಲಿ ನಿನ್ನೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸತ್ತವರ ಸಂಖ್ಯೆ 17ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡ 30 ಜನರನ್ನು ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.